12 ವರ್ಷಗಳ ಹಿಂದೆ ರಸ್ತೆ ಅಪಘಾತವಾಗಿ ಬಿದ್ದಿದ್ದ 12-13 ವರ್ಷದ ಬಾಲಕನನ್ನು ಯಾರೋ ಮೆಗ್ಗಾನ್ ಆಸ್ಪತ್ರೆಗೆ ತಂದು ದಾಖಲಿಸಿದ್ದರು. ಬದುಕುವುದೇ ಇಲ್ಲ ಎಂದುಕೊಂಡಿದ್ದ ಆತ 1 ವರ್ಷ ಸಾವು ಬದುಕಿನ ನಡುವೆ ಹೋರಾಡಿ ಕೊನೆಗೂ ಚೇತರಿಸಿಕೊಂಡಿದ್ದ. ಮಗುವಿಗಾಗಿ ಸಾಕಷ್ಟು ಹುಡುಕಾಟ ನಡೆಸಿ, ಜಾಹೀರಾತು ನೀಡಿ ಪೊಲೀಸರ ಮೊರೆ ಹೋದರು ಬಾಲಕ ಸಿಕ್ಕಿರಲಿಲ್ಲ. ತಲೆಗೆ ಪೆಟ್ಟಾಗಿದ್ದರಿಂದಾಗಿ ಬೇರೆಡೆ ಕಳುಹಿಸುವಂತೆಯೂ ಇರಲಿಲ್ಲ. ಕೊನೆಗೆ ಆಸ್ಪತ್ರೆಯ ದಾದಿಯರೇ ಮಗುವನ್ನು ಸಾಕಲು ನಿರ್ಧರಿಸಿ ನಾಮಕರಣವನ್ನು ಮಾಡಿದ್ದರು. ನರ್ಸ್ ಪೊನ್ನಮ್ಮ ಅವರು ಜವರೇಗೌಡನಿಗೆ ದೇವರ ಮಗ ಎಂದು ನಾಮಕರಣ ಮಾಡಿದ್ದರು.