ಮಂಜೇಶ್ವರಿ ಎಂಬ ಗಿಲ್ ನೆಟ್ ದೋಣಿ ಇಂದು ಬೆಳಗ್ಗೆ ಮಲ್ಫೆ ಬಂದರಿಗೆ ತೆರಳುತ್ತಿದ್ದ ವೇಳೆ ಮೂರು ಕಿ.ಮೀ. ಕ್ರಮಿಸಿದ ನಂತರ ತಣ್ಣೀರು ಬಾವಿ ಸಮೀಪ ತೀವ್ರ ಅಲೆಗಳ ಪರಿಣಾಮ ಪ್ರವಾಕ್ಕೆ ಸಿಲುಕಿತ್ತು. ಅಪಾಯದ ಮುನ್ಸೂಚನೆಯನ್ನು ಅರಿತ ಮೀನುಗಾರರು ಅಲರಾಂ ನೀಡಿದ ಹಿನ್ನೆಲೆಯಲ್ಲಿ ಕರಾವಳಿ ರಕ್ಷಣಾ ಪಡೆ ತಂಡ ತಕ್ಷಣ ನೆರವಿಗೆ ಧಾವಿಸಿ ಮೀನುಗಾರರಿಗೆ ರಕ್ಷಣೆ ಒದಗಿಸಿದೆ.