ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತು ಕೊಟ್ಟು ಅಪರಿಚಿತ ಯುವಕ ಪರಾರಿ

ಬಸ್ ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತು ನೀಡಿದ ಯುವಕ ಪರಾರಿಯಾಗಿರುವ ಘಟನೆ ಜೀವನ್‌ಬಿಮಾನಗರದಲ್ಲಿ...
ಬೆಂಗಳೂರು:  ಬಸ್  ನಿಲ್ದಾಣದಲ್ಲಿ ನಿಂತಿದ್ದ ಯುವತಿ ಕೆನ್ನೆಗೆ ಮುತ್ತು ನೀಡಿದ ಯುವಕ ಪರಾರಿಯಾಗಿರುವ ಘಟನೆ ಜೀವನ್‌ಬಿಮಾನಗರದಲ್ಲಿ ನಡೆದಿದೆ.
ಜೀವನ್‌ಬಿಮಾನಗರದ  ಮುಖ್ಯರಸ್ತೆಯಲ್ಲಿ ಯುವತಿಯ ಮೇಲೆ ದುಷ್ಕರ್ಮಿಗಳು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. 
ಕೋರಮಂಗಲ ನಿವಾಸಿಯಾಗಿರುವ ಯುವತಿ ನಗರದ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಶನಿವಾರ ಸಂಜೆ ತಮ್ಮ ಸ್ನೇಹಿತರ ಜೊತೆ ಹೊರಗೆ ಹೋಗಿ  ಕ್ಯಾಬ್ ನಲ್ಲಿ ವಾಪಸ್ ಮನೆಗೆ ಬರುತ್ತಿದ್ದರು. 
ಈ ವೇಳೆ ಯುವತಿಯನ್ನು ಬಸ್ ನಿಲ್ದಾಣದಲ್ಲಿ ಇಳಿಸಲಾಯಿತು, ತನ್ನ ಮತ್ತೊಬ್ಬ ಸ್ನೇಹಿತನಿಗಾಗಿ ಯುವತಿ ಅಲ್ಲಿ ಕಾಯುತ್ತಿದ್ದಳು. ಈ ವೇಳೆ ಅಲ್ಲಿಗೆ ನಡೆದುಕೊಂಡು ಬಂದ ಯುವಕ ಆಕೆಯ ಕೆನ್ನೆಗೆ ಮುತ್ತುಕೊಟ್ಟಿದ್ದಾನೆ, ಆತನನ್ನು ಹಿಡಿಯಲು ಯತ್ನಿಸಲಾಯಿತಾದರೂ ಆತ ತಪ್ಪಿಸಿಕೊಂಡು ಓಡಿಹೋಗಿದ್ದಾನೆ.
ಘಟನೆ ನಡೆದ ಪ್ರದೇಶದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿಲ್ಲ  ಎಂದು ಹೇಳಿರುವ ಪೊಲೀಸರು, ಆಕೆಯ ಸ್ನೇಹಿತ ದೂರು ಕೊಟ್ಟಿದ್ದು, ಅದರನ್ವಯ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com