ಇವರಿಬ್ಬರೂ ಮೊನ್ನೆ ಬುಧವಾರ ತಡರಾತ್ರಿಯವರೆಗೆ ಮದ್ಯಪಾನ ಮಾಡಿ 1.30ರ ಹೊತ್ತಿಗೆ ಊಟಕ್ಕೆ ಕುಳಿತರು.ಊಟದ ಮಧ್ಯೆ ವಿದ್ಯಾಶಂಕರ್ ಅಪಾರ್ಟ್ ಮೆಂಟ್ ನ ಬಾಲ್ಕನಿಗೆ ತೆರಳಿದರು. ಕುಡಿದ ಮತ್ತಿನಲ್ಲಿದ್ದ ವಿದ್ಯಾಶಂಕರ್ ವಿದ್ಯುತ್ ತಂತಿಯ ಮೇಲೆ ಸಿಕ್ಕಿಹಾಕಿಕೊಂಡು ಬಾಲ್ಕನಿಯಿಂದ ಕೆಳಗೆ ಬಿದ್ದರು. ವಿದ್ಯಾಶಂಕರ್ ಎಷ್ಟು ಹೊತ್ತಾದರೂ ಮರಳಿ ಬಾರದಿದ್ದಾಗ ಯೋಗಿಶ್ ಕೆಳಗೆ ಹೋಗಿ ಹುಡುಕಾಡಿದಾಗ ತಮ್ಮ ಸೋದರ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂತು.