ಇದರೊಂದಿಗೆ ರಾಜ್ಯದ ವಿವಿಧ ಅರಣ್ಯ ಪ್ರದೇಶಗಳಲ್ಲೂ ಮತ್ತೆ ಬೆಂಕಿ ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ಬೆಂಕಿಗಾಹುತಿಯಾಗಿದೆ. ಹಲವು ದಿನಗಳ ಕಾಲ ಬೆಂಕಿಯಲ್ಲಿ ಬೆಂದಿದ್ದ ಬಂಡೀಪುರ ಅರಣ್ಯ ವ್ಯಾಪ್ತಿಯ ಬಿಳಿಗಿರಿರಂಗನಬೆಟ್ಟ ಹಾಗೂ ಕೊಡಗಿನ ಅತ್ತೂರು, ಆನೆಕಾಡು ಪ್ರದೇಶದಲ್ಲಿ ನಿನ್ನೆ ಬೆಂಕಿ ಕಾಣಿಸಿಕೊಂಡಿದ್ದು, ಅಪಾರ ಪ್ರಮಾಣ ಅರಣ್ಯ ಸಂಪತ್ತು ನಾಶವಾಗಿದೆ.