ಶೇ. 33 ರಷ್ಟು ಬೆಳೆ ನಷ್ಟ ಅನುಭವಿಸಿರುವ ರೈತರು ಪರಿಹಾರಕ್ಕೆ ಅರ್ಹರಾಗಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಮಾರ್ಗದರ್ಶನದಂತೆ ರೈತರಿಗೆ ಪರಿಹಾರ ಹಣ ನಿಗದಿ ಮಾಡಲಾಗಿದೆ. ಮಳೆ ಆಧಾರಿತ ಒಂದು ಎಕರೆ ಭೂಮಿಗೆ 6,800 ರು. ಹಾಗೂ ನೀರಾವರಿ ಆಧಾರಿತ 1 ಎಕರೆ ಭೂಮಿಗೆ 13,500 ರು.ಎಲ್ಲಾ ಋತುಗಳಲ್ಲಿ ಬೆಳೆ ಬೆಳೆಯುವ ಎರಡು ಎಕರೆ ಜಮೀನಿಗೆ18 ಸಾವಿರ ರು. ಪರಿಹಾರ ಹಣ ನಿಗದಿ ಮಾಡಲಾಗಿದೆ.