ಬರದ ಬವಣೆಯನ್ನು ಮನುಷ್ಯರಾದ ನಮಗೆ ಸಹಿಸಿಕೊಳ್ಳಲು ಅಸಾಧ್ಯವೆಂದು ಅನಿಸತೊಡಗಿದೆ. ಇನ್ನು ಮೂಕ ಪ್ರಾಣಿಗಳ ವೇದನೆಯನ್ನು ಕೇಳುವವರು ಯಾರು...? ಆಧುನಿಕ ಜಗತ್ತಿಗೆ ಮಾರು ಹೋಗಿ ಸಂಬಂಧಗಳನ್ನೇ ಕಡೆಗಣಿಸುತ್ತಿರುವ ಮನುಷ್ಯರು ಮೂಕ ಪಕ್ಷಿಗಳ ಒಡನಾಟಗಳ ಬಗ್ಗೆ ಕೇಳುವರೇ...? ಬರದ ಬವಣೆಗೆ ಸಿಲುಕಿ ಬಳಲುತ್ತಿರುವ ಪ್ರಾಣಿ, ಪಕ್ಷಿಗಳಿಗೆ ಆಹಾರ ನೀರು, ಒದಗಿಸುವ ಕೆಲಸ ಆಗಬೇಕು, ಹೀಗೆಂದು ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳನ್ನು ಹರಿಬಿಡುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಎಲ್ಲರೂ ಸಂದೇಶವನ್ನು ಹೇಳುವವರೇ...ಆದರೆ, ಅನುಸರಿಸುವವರ ಸಂಖ್ಯೆ ಮಾತ್ರ ತೀರಾ ವಿರಳ. ಆದರೆ, ಇಲ್ಲೊಬ್ಬ ವ್ಯಕ್ತಿ ತಮ್ಮ ಕೆಲಸದ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ.