ನಂತರ ಹೊರ ಹೋಗುವಾಗ ಬಾರ್ ನಲ್ಲಿದ್ದ ಸಾರಾಯಿ ಬಾಟಲಿಗಳು ಮತ್ತು ಸಿಬ್ಬಂದಿಗಳ ಬಳಿಯಿದ್ದ ಹಣವನ್ನು ಬಲವಂತವಾಗಿ ಕಿತ್ತುಕೊಂಡು ದರೋಡೆಕೋರರಂತೆ ವರ್ತಿಸಿ ಹೋಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಎಸ್'ಪಿ ರವಿಕಾಂತೇಗೌಡ ಅವರು ಡಿವೈಎಸ್ಪಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚನೆ ಮಾಡಿದ್ದಾರೆ. ಈಗಾಗಲೇ ತನಿಖಾ ತಂಡ ತನಿಖೆಯನ್ನು ಆರಂಭಿಸಿದ್ದು, ವಾರದೊಳಗಾಗಿ ತನಿಖಾ ತಂಡ ವರದಿ ಸಲ್ಲಿಕೆ ಮಾಡಲಿದೆ ಎಂದು ತಿಳಿದುಬಂದಿದೆ.