"ಪರೀಕ್ಷೆ ಮತ್ತು ಯಶಸ್ಸು" ವಿಚಾರ ಸಂಕಿರಣ
ರಾಜ್ಯ
"ಪರೀಕ್ಷೆ ಮತ್ತು ಯಶಸ್ಸು" ವಿಚಾರ ಸಂಕಿರಣ
ಸ್ವಾಮಿ ವಿವೇಕಾನಂದ ಬ್ರಿಗೇಡ್ ವತಿಯಿಂದ ನಗರದ ಕಲಾಗ್ರಾಮದಲ್ಲಿ "ಪರೀಕ್ಷೆ ಮತ್ತು ಯಶಸ್ಸು" ವಿಚಾರದ ಕುರಿತು ವಿಚಾರ ಸಂಕಿರಣ ನಡೆಯಿತು.
ಬೆಂಗಳೂರು: ಸ್ವಾಮಿ ವಿವೇಕಾನಂದ ಬ್ರಿಗೇಡ್ ವತಿಯಿಂದ ನಗರದ ಕಲಾಗ್ರಾಮದಲ್ಲಿ "ಪರೀಕ್ಷೆ ಮತ್ತು ಯಶಸ್ಸು" ವಿಚಾರದ ಕುರಿತು ವಿಚಾರ ಸಂಕಿರಣ ನಡೆಯಿತು.
ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಕುರಿತಂತೆ ಶಿಕ್ಷಣ ಕ್ಷೇತ್ರದ ಹಲವು ಗಣ್ಯರು ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಶ್ವಿನಿ ಅಂಗಡಿ ಅವರು ಪಾಲ್ಗೊಂಡಿದ್ದರೆ, ವಿಶೇಷ ಉಪನ್ಯಾಸಕರಾಗಿ ಬ್ರಿಗೇಡ್ ಅಧ್ಯಕ್ಷ ಹಾಗೂ ಲೇಖಕ ರವಿ ಕೀರ್ತಿ.ಟಿ, ವಿಜಯ ಕಾಲೇಜಿನ ಪ್ರೊ.ವಾದಿರಾಜ್, ಆರ್ ಹಾಗೂ ಅರುಣೋದಯ ಕಾಲೇಜಿನ ಪ್ರಾಂಶುಪಾಲರಾದ ಎಂ ಕವಿತಾ ಅವರು ಪಾಲ್ಗೊಂಡಿದ್ದರು.
ಕಾರ್ಯಮಕ್ರಮವನ್ನು ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿಗಳಾದ ಎಚ್ ತುಕಾರಾಂ ಹಾಗೂ ಉಪನ್ಯಾಸಕ ಚೌಡಯ್ಯ ಅವರು ಉದ್ಘಾಟಿಸಿದರು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ