ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಉದಯಗಿರಿ ಸಮೀಪದ ಮುನೇಶ್ವರ ನಗರದಲ್ಲಿ ತೆರೆದಿದ್ದ ಚರಂಡಿಯಲ್ಲಿ ನೀರು ತುಂಬಿ ಹರಿದಿದೆ.ಚರಂಡಿ ನೀರು ಹುಸೇನ್ ಮನೆಯೊಳಗೆ ನುಗ್ಗಿತ್ತು. ರಾತ್ರಿ 11ರ ವೇಳೆಯಲ್ಲಿ ದಂಪತಿ ಮನಯೊಳಗೆ ತುಂಬಿದ್ದ ನೀರನ್ನು ಹೊರ ಹಾಕುತ್ತಿರುವಾಗ ಬಾಲಕಿ ಅಲಿಯಾ ಮನೆಯಿಂದ ಹೊರಗೆ ಹೋಗಿ ಚರಂಡಿಯೊಳಗೆ ಬಿದ್ದಿದ್ದಾಳೆ. ನಂತರ ಪೋಷಕರು ಮಗಳನ್ನು ಸುತ್ತಮುತ್ತಲು ಹುಡುಕಿದ್ದಾರೆ, ಆದರೆ ಎಲ್ಲಿಯೂ ಕಾಣಲಿಲ್ಲ, ಒಂದು ಗಂಟೆಯನಂತರ ಚರಂಡಿಯಲ್ಲಿ ಸಿಲುಕಿಕೊಂಡಿದ್ದಾಳೆ.