ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಧನಂಜಯ್ ಗಣಪತಿ ಬಂಕರ್ ಅವರು, ನಾನು ಮಹಾರಾಷ್ಟ್ರ ಮೂಲದವನಾಗಿದ್ದು, ಮಹಾರಾಷ್ಟ್ಕ ಸರ್ಕಾರದ ಬಿಡಬಲ್ಯೂಡಿ ಇಲಾಖೆಯಲ್ಲಿ ಸೂಪರಿಂಟೆಂಡ್ ಎಂಜಿನಿಯರ್ ಆಗಿ ನಿವೃತ್ತಿಯಾಗಿದ್ದೇನೆ. ನನಗೀಗ 68 ವರ್ಷ..ನನಗೆ ನೆನಪಿನ ಶಕ್ತಿ ಕಡಿಮೆ ಇದ್ದು, ಇದೇ ಕಾರಣಕ್ಕೆ ಎಟಿಎಂ ಪಿನ್ ಸಂಖ್ಯೆಗಳನ್ನು ಬರೆದು ಪರ್ಸ್ ನೊಳಗೆ ಹಾಕಿರುತ್ತಿದ್ದೆ. ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿನಲ್ಲಿ ಪರ್ಸ್ ಕಳವಾಗಿರುವ ಸಾಧ್ಯತೆ ಇದ್ದು, ಪರ್ಸ್ ನಲ್ಲಿದ್ದ ಎಟಿಎಂ ಪಿನ್ ಸಂಖ್ಯೆಯನ್ನು ಉಪಯೋಗಿಸಿಕೊಂಡು ಕಳ್ಳನೋರ್ವ ಹಣ ಕಳವು ಮಾಡಿದ್ದಾನೆ. ಪರ್ಸ್ ನಲ್ಲಿ ಕೇವಲ 3 ಎಟಿಎಂ ಕಾರ್ಡ್ ಗಳು ಇದ್ದವು. ಎರಡು ಎಸ್ ಬಿಐ ಬ್ಯಾಂಕ್ ನದ್ದಾಗಿದ್ದರೆ ಮತ್ತೊಂದು ಬ್ಯಾಂಕ್ ಆಫ್ ಮಹಾರಾಷ್ಟ್ರದ್ದಾಗಿತ್ತು. ಎಟಿಎಂ ಕಾರ್ಡ್ ಗಳು ಮಾತ್ರವಲ್ಲದೇ ನನ್ನ ಆಧಾರ್ ಮತ್ತು ಪ್ಯಾನ್ ಕಾರ್ಡ್ ಗಳ ನಕಲು ಪ್ರತಿಗಳು ಕೂಡ ಇದ್ದವು. ಅದರೊಂದಿಗೆ 1400 ನಗದು ಹಣ ಕೂಡ ಇತ್ತು ಎಂದು ಹೇಳಿದ್ದಾರೆ.