ಟ್ವಿಟರ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿರುವ ಸಿದ್ದರಾಮಯ್ಯ ಅವರು, "ಬೆಳಗಾವಿಯಲ್ಲಿ ಖಾಸಗಿ ವೈದ್ಯರ ತಂಡವನ್ನು ಭೇಡಿ ಮಾಡಿ ಚರ್ಚಿಸಿದ್ದೇನೆ. ಈ ವೇಳೆ ವೈದ್ಯರ ಮನವಿಯನ್ನು ಆಲಿಸಿದ್ದು, ಖಾಸಗಿ ವೈದ್ಯರನ್ನೂ ಗಣನೆಗೆ ತೆಗೆದುಕೊಂಡೇ ಕೆಪಿಎಂಇ ಕಾಯ್ದೆಯನ್ನು ಮಂಡಿಸುತ್ತೇವೆ. ವೈದ್ಯರ ಮುಷ್ಕರದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು, ಕೂಡಲೇ ವೈದ್ಯರು ತಮ್ಮ ಪ್ರತಿಭಟನೆ ಕೈ ಬಿಡಬೇಕು ಎಂದು ಹೇಳಿದ್ದಾರೆ.