ಮೂರು ವರ್ಷಗಳ ವಾದದ ನಂತರ 10,000 ರೂಪಾಯಿ ಪರಿಹಾರ ಮತ್ತು 10,000 ರೂಪಾಯಿ ಕಾನೂನು ವ್ಯಾಜ್ಯ ವೆಚ್ಚ ನೀಡಬೇಕೆಂದು ಆದೇಶಿಸಿದೆ. ಆದೇಶ ಬಂದ 30 ದಿನಗಳೊಳಗೆ ಮಂಜುಳಾಗೆ ಈ 20,000 ರೂಪಾಯಿ ನೀಡಬೇಕೆಂದು ಆದೇಶಿಸಿದೆ. ಇದಕ್ಕೆ ಕಾರಣಕರ್ತರು ನಿರ್ವಾಹಕ ಚೆನ್ನೆ ಗೌಡ, ಬನಶಂಕರಿ ವಿಭಾಗದ ಡಿಪೊ ಮ್ಯಾನೇಜರ್ ಮತ್ತು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.