ಅಧಿವೇಶನ ನಡೆಯುವ ಎಲ್ಲಾ ಸ್ಥಳಗಳಿಗೆ ನಾವು ಭೇಟಿ ನೀಡಿದ್ದೆವು.. ಶಾಸಕರು ಹಾಗೂ ಸಂಸದರು ಪ್ರತೀಯೊಬ್ಬರನ್ನೂ ಆಹ್ವಾನಿಸಲು ಬೆಳಗಾವಿಗೂ ಕೂಡ ನೀಡಿದ್ದೆವು. ಕೆಲ ಜಿಲ್ಲೆಗಳ ಅಧಿಕಾರಿಗಳು, ಪೋಷಕರು, ಮಕ್ಕಳು ಹಾಗೂ ಶಿಕ್ಷಕರು ಶಾಸಕರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದರು. ಆಹ್ವಾನ ನೀಡುವ ವೇಳೆ ಬರುತ್ತೇವೆಂದು ತಿಳಿಸಿದ್ದರು. ಆದರೂ ಕಾರ್ಯಕ್ರಮಕ್ಕೆ ಬಂದಿಲ್ಲ. ವಿಧಾನಪರಿಷತ್ ಸದಸ್ಯ ಇವಾನ್ ಡಿಸೋಜಾ ಹಾಗೂ ರಮೇಶ್ ಬಾಬು ಅವರು ಕಾರ್ಯಕ್ರಮ ಅಂತ್ಯಗೊಳ್ಳುವ ವೇಳೆ ಹಾಜರಾಗಿದ್ದರು. ಕಾರ್ಣಿಕ್ ಅವರು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಉತ್ತರ ನೀಡಿದ್ದರು ಎಂದು ಕಾರ್ಯಕ್ರಮ ಆಯೋಜಕರು ಹೇಳಿದ್ದಾರೆ.