ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯುಕ್ತ ಟಿ ಸುನಿಲ್ ಕುಮಾರ್ ಅವರು, ದರ್ಶಿನಿಗಳಿಗೆ ಮಾತ್ರ ಅನ್ವಯ: ‘ಪ್ರಯಾಣಿಕರಿಗೆ ದಿನದ 24 ಗಂಟೆಯೂ ಆಹಾರ ಸಿಗಬೇಕು ಎಂಬ ಉದ್ದೇಶದಿಂದ ಈ ತೀರ್ಮಾನ ಕೈಗೊಂಡಿದ್ದೇವೆ. ಇದು ದರ್ಶಿನಿಗಳಿಗೆ ಮಾತ್ರ ಅನ್ವಯವಾಗಲಿದೆ. ಪಂಚತಾರಾ ಹೋಟೆಲ್ ಸೇರಿ ಇತರೆ ಹೋಟೆಲ್ಗಳಿಗೆ ಅನ್ವಯಿಸುವುದಿಲ್ಲ. ಅಂತೆಯೇ ಸಮಯದ ನಿರ್ಬಂಧ ಬಗ್ಗೆ ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿ ಮೇಲೆ ಕ್ರಮ ಜರುಗಿಸದಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಆದರೂ ಯಾರಾದರೂ ಕಿರುಕುಳ ನೀಡಿದರೆ, ಹೋಟೆಲ್ ಮಾಲೀಕರು ದೂರು ನೀಡಬಹುದು. ಆದರೆ ದರ್ಶಿನಿಗಳು ಮದ್ಯ ಮಾರಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಅವರು ಎಚ್ಚರಿಕೆ ನೀಡಿದರು.