ಸಂತೋಷ್ ಅಂತ್ಯಸಂಸ್ಕಾರವನ್ನು ಬನಶಂಕರಿಯ ಚಿತಾಗಾರದಲ್ಲಿ ನಡೆಸಲಾಯಿತು. ಘಟನೆ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಸಂತೋಷ್ ತಾಯಿ ಗೌರಮ್ಮ, ನನ್ನ ಮಗ ಯಾವತ್ತೂ ಸಾಮಾನ್ಯವಾಗಿ ರಾತ್ರಿ 9 ಗಂಟೆ ಹೊತ್ತಿಗೆ ಬರುತ್ತಿದ್ದ. ಆದರೆ ನಿನ್ನೆ ಬಂದಿರಲಿಲ್ಲ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯಿಂದ ನನ್ನ ಮಗ ಕಾಣೆಯಾಗಿದ್ದಾನೆ ಎಂದು ಫೋನ್ ಬಂತು. ನನಗೆ ಆಘಾತವಾಯಿತು. ನನಗೆ ಅವನು ಬೇರೆಲ್ಲಿಗೆ ಹೋಗುವುದು ಗೊತ್ತಿರಲಿಲ್ಲ. ಅವನ ಜೊತೆ ಹೋದವರ ಬಗ್ಗೆಯೂ ತಿಳಿದಿರಲಿಲ್ಲ ಎನ್ನುತ್ತಾರೆ.