ಮಂಗಳೂರು, ಮೈಸೂರು, ಹುಬ್ಬಳ್ಳಿಗಳಲ್ಲಿ ಕೂಡ ತರಕಾರಿ ಬೆಲೆ ಜಾಸ್ತಿಯಾಗಿದೆ. ಅನಿಯಮಿತ ಮಳೆಯೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ. ಮಳೆ ಹೆಚ್ಚಾಗಿದ್ದರಿಂದ ಮತ್ತು ಸೂಕ್ತ ಕಾಲಕ್ಕೆ ಸರಿಯಾಗಿ ಮಳೆ ಬಾರದ್ದರಿಂದ ಬೆಳೆಯಾಗದೆ ತರಕಾರಿಗಳ ಬೆಳೆ ಕುಂಠಿತವಾಗಿದೆ. ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ಜಿ.ಆರ್.ಶ್ರೀನಿವಾಸ್, ಮಳೆ ಜಾಸ್ತಿಯಾದಾಗಲೆಲ್ಲ ಬೆಳೆಗಳು ನಾಶವಾಗುತ್ತವೆ. ಮುಂದಿನ ಬೆಳೆ ಸರಿಯಾಗಿ ಬೆಳೆದು ಕೈಗೆ ಸಿಗಲು 2 ತಿಂಗಳು ಬೇಕಾಗಬಹುದು. ಅಲ್ಲಿಯವರೆಗೆ ತರಕಾರಿ ಬೆಲೆ ಹೀಗೆ ಏರಿಳಿತವಾಗುತ್ತಿರಬಹುದು ಎನ್ನುತ್ತಾರೆ.