ಸುಳ್ಯಾದಲ್ಲಿ ಮತ್ತೊಬ್ಬ ಕಾಡಿನ ಮನುಷ್ಯ
ಸುಳ್ಯಾ ತಾಲೂಕಿನ ಅರಂತೊಡು ಗ್ರಾಮದಲ್ಲಿ ಕಾಡಿನ ಮನುಷ್ಯರಿದ್ದು, ಕಳೆದ 12 ವರ್ಷಗಳಿಂದ ಚಂದ್ರಶೇಖರ್ ಗೌಡ ಅವರು ಕಾಡಿನಲ್ಲಿ ಜೀವನ ನಡೆಸುತ್ತಿದ್ದಾರೆ.
ಚಂದ್ರಶೇಖರ್ ಅವರು ವೃತ್ತಿಯಲ್ಲಿ ಕಾರು ಚಾಲಕರಾಗಿದ್ದು, ಕೋಅಪರೇಟಿವ್ ಸೊಸೈಟಿಯಲ್ಲಿ ಸಾಲವನ್ನು ಪಡೆದುಕೊಂಡಿದ್ದರು. ಸಾಲವನ್ನು ತೀರಿಸಲು ಸಾಧ್ಯವಾಗದೆ ತೀವ್ರವಾಗಿ ನೊಂದು ಚಂದ್ರಶೇಖರ್ ಅವರು ಕಾಡಿನಲ್ಲಿ ವಾಸ ಮಾಡಲು ಆರಂಭಿಸಿದ್ದರು. ಬಳಿಕ ಈ ಬಗ್ಗೆ ಮಾಹಿತಿ ತಿಳಿದಿದ್ದ ಉಪಆಯುಕ್ತ ಎ.ಬಿ. ಇಬ್ರಾಹಿಂ ಅವರು ವರ್ಷಗಳ ಹಿಂದೆ ತಮ್ಮ ಕಚೇರಿಗೆ ಚಂದ್ರಶೇಖರ್ ಅವರನ್ನು ಕರೆದುಕೊಂಡು ಹೋಗಿ, ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ 1 ಎಕರೆ ಭೂಮಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಅಧಿಕಾರಿಗಳ ಮಾತನ್ನು ಕೇಳದ ಚಂದ್ರಶೇಖರ್ ಅವರು ಈಗಲೂ ಕಾಡಿನಲ್ಲಿಯೇ ಜೀವನ ನಡೆಸುತ್ತಿದ್ದಾರೆ.