ಮಂಗಳೂರು: 1 ವರ್ಷದ ಕಂದಮ್ಮನನ್ನು ಬಲಿ ಪಡೆದ 'ಚಕ್ಕುಲಿ'!

ಗಂಟಲಲ್ಲಿ ಚಕ್ಕುಲಿ ಸಿಕ್ಕಿಕೊಂಡ ಪರಿಣಾಮ ಒಂದು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಬೆಳ್ತಂಗಡಿ ...
ಮೃತ ಆರುಷ್
ಮೃತ ಆರುಷ್
ಮಂಗಳೂರು:  ಗಂಟಲಲ್ಲಿ ಚಕ್ಕುಲಿ ಸಿಕ್ಕಿಕೊಂಡ ಪರಿಣಾಮ ಒಂದು ವರ್ಷದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆಯಲ್ಲಿ ನಡೆದಿದೆ.ಗೇರುಕಟ್ಟೆಯ ನಿವಾಸಿ ವಿಠಲ್​ ಎಂಬುವವರ ಪುತ್ರ ಆರುಷ್​ ಸಾವಿಗೀಡಾಗಿರುವ ದುರ್ದೈವಿ. 
ಮಗುವಿನ 1 ವರ್ಷದ ಹುಟ್ಟುಹಬ್ಬ ನಡೆದು ಕೇವಲ 2 ದಿನಗಳಾಗಿತ್ತು. ಮಂಗಳವಾರ ಬೆಳಗ್ಗೆ ಕುಟುಂಬದ ಸದಸ್ಯರೊಬ್ಬರು ಮಗುವಿನ ಕೈಯ್ಯಲ್ಲಿ ಚಕ್ಕುಲಿ ಚೂರೊಂದನ್ನು ನೀಡಿದ್ದಾರೆ. ಈ ಮೊದಲು ಕೂಡ ಆರುಷ್ ಚಕ್ಕುಲಿಯನ್ನು ಅಗಿದು ತಿನ್ನುತ್ತಿದ್ದ. ಆದರೆ ಈ ಬಾರಿ ಚಕ್ಕುಲಿಯನ್ನು ನುಂಗಲು ಯತ್ನಿಸಿದ್ದಾನೆ. ದುರಾದೃಷ್ಟವಶಾತ್ ಚಕ್ಕುಲಿ ತುಂಡು ಆತನ ಏರ್ ಪೈಪ್ ಒಳಗೆ ಹೋಗಿ ಉಸಿರಾಡಲು ತೊಂದರೆಯಾಗಿದೆ. 
ಇದನ್ನು ನೋಡಿದ ಕುಟುಂಬಸ್ಥರು ಕೂಡಲೇ ಮಗುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲಾಗಲೇ  ಮಗು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಸ್ವಾಭಾವಿಕ ಸಾವಿನ ಪ್ರಕರಣ ದಾಖಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com