ಬಿಬಿಎಂಪಿ
ರಾಜ್ಯ
ಮಳೆಯಿಂದಾದ ಹಾನಿಯ ದುರಸ್ತಿಗೆ ಬಿಬಿಎಂಪಿಗೆ ಬೇಕಂತೆ 1,664 ಕೋಟಿ!
ಕೆಲವು ದಿನಗಳಿಂದ ಸುರಿದ ಮಳೆಗೆ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ದುರಸ್ತಿ ಕಾಮಗಾರಿಗೆ 1,664 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ನಗರಾಭಿವೃದ್ಧಿ..
ಬೆಂಗಳೂರು: ಕೆಲವು ದಿನಗಳಿಂದ ಸುರಿದ ಮಳೆಗೆ ಉಂಟಾಗಿರುವ ಹಾನಿಯನ್ನು ಸರಿಪಡಿಸಲು ದುರಸ್ತಿ ಕಾಮಗಾರಿಗೆ 1,664 ಕೋಟಿ ರೂಪಾಯಿ ಬಿಡುಗಡೆ ಮಾಡುವಂತೆ ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ನಗರಾಭಿವೃದ್ಧಿ ಇಲಾಖೆಗೆ ಮನವಿ ಮಾಡಿದ್ದಾರೆ.
ನಾಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಎನ್ ಮಂಜುನಾಥ್ ಪ್ರಸಾದ್ ಪತ್ರ ಬರೆದಿದ್ದು ಆ.15 ರಿಂದ ಸೆಪ್ಟೆಂಬರ್ 3 ರ ನಡುವೆ ಸುರಿದ ಮಳೆಯಿಂದಾಗಿ ರಸ್ತೆ, ಪಾದಾಚಾರಿ ಪಥ, ಚರಂಡಿ, ಕೆರೆಗಳು ಹಾನಿಗೀಡಾಗಿದ್ದು, ಸಾರ್ವಜನಿಕರಿಗೆ ಅನಾನುಕೂಲವಾಗುತ್ತಿದೆ. ಹಾನಿಗೊಳಗಾಗಿರುವುದನ್ನು ದುರಸ್ತಿಗೊಳಿಸಲು 1,664 ಕೋಟಿ ಅಗತ್ಯವಿದೆ ಎಂದು ಪತ್ರದಲ್ಲಿ ಹೇಳಿದ್ದಾರೆ.
ಸೆ.4 ರಂದೇ ಪತ್ರ ಬರೆದಿದ್ದು, ಕಾಮಗಾರಿಗೆ ಹಣಾ ಬಿಡುಗಡೆಯಾಗಬೇಕಾದರೆ ಒಂದಷ್ಟು ಸಮಯ ಬೇಕಾಗುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ