ಚಿತ್ರದುರ್ಗ: ನದಿಗಳ ಪುನರುಜ್ಜೀವನಕ್ಕಾಗಿ ಈಶಾ ಫೌಂಡೇಶನ್ ನ ಸದ್ಗುರು ಜಗದೀಶ್ ವಾಸುದೇವ್ ಅವರು ಪ್ರಾರಂಭಿಸಿರುವ ರ್ಯಾಲಿಯ ಬಗ್ಗೆ ಮ್ಯಾಗ್ಸೆಸೆ ಪ್ರಶಸ್ತಿ ಪಡೆದಿರುವ, ಜಲಸಂರಕ್ಷಕ ಡಾ. ರಾಜೇಂದ್ರ ಸಿಂಗ್ ಪ್ರತಿಕ್ರಿಯೆ ನೀಡಿದ್ದು, ನದಿಗಳ ಬಗ್ಗೆ ಜ್ಞಾನವಿಲ್ಲದೇ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಅದು ಯಶಸ್ವಿಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.