ಕೊಡಗು, ಕುಶಾಲನಗರ, ರಾಮನಾಥ್ ಪುರ, ಶ್ರೀರಂಗ ಪಟ್ಟಣದ ನಿಮಿಷಾಂಬ ದೇಗುಲ, ಪಶ್ಚಿಮ ವಾಹಿನಿ, ಮತ್ತು ಸ್ನಾನ ಘಟ್ಟಗಳಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕಳೆದ ವರ್ಷ ಕುಶಾಲ ನಗರಕ್ಕೆ ಆಗಮಿಸಿದ್ದಾಗ ಕಾವೇರಿ ನದಿ ಅಪಾರ ಮಟ್ಟದ ತ್ಯಾಜ್ಯಗಳಿಂದ ಮಲಿನವಾಗುತ್ತಿರುವುದು ಕಂಡುಬಂದಿತ್ತು. ಅಂದೇ ಈ ಸ್ವಚ್ಛತಾ ಕಾರ್ಯಾಚರಣೆ ಕುರಿತು ನಿರ್ಧರಿಸಿ ರೂಪುರೇಷೆ ಸಿದ್ಧಪಡಿಸಿದೆವು ಎಂದು ಅವರು ಹೇಳಿದರು.