"ಆತ ಪ್ರಾರಂಭದಲ್ಲಿ ಒಳ್ಳೆಯ ಕೆಲಸಗಾರನಾಗಿದ್ದ ಆದರೆ ತಿಂಗಳು ಕಳೆದಂತೆ ಹೆಚ್ಚು ಹೆಚ್ಚು ವಿಶ್ರಾಂತಿ ತೆಗೆದುಕೊಳ್ಳಲು ಪ್ರಾರಂಭಿಸಿದ್ದ. ಕೆಲಸದ ಕಡೆ ಹೆಚ್ಚು ಗಮನ ಕೇಂದ್ರೀಕರಿಸುತ್ತಿರಲಿಲ್ಲ. ನಾನು ಅವನಿಗೆ ಸಾಕಷ್ಟು ಬಾರಿ ಎಚ್ಚರಿಸಿದೆ ಆದರೆ ಆತ ತಿದ್ದಿಕೊಳ್ಳಲಿಲ್ಲ. ಕಡೆಗೆ ಆತ ಸ್ಪಾ, ಸಲೂನ್ ನಲ್ಲಿನ ಇತರೆ ಸಿಬ್ಬಂದಿಗಳಿಗೆ ಕಿರುಕುಳ ನೀಡಲು ಪ್ರಾರಂಭಿಸಿದ. ನನ್ನ ಮುಂದೆ ಬೇರೆ ಆಯ್ಕೆಗಳಿರಲಿಲ್ಲ. ನಾನವನನ್ನು ಕೆಲಸದಿಂದ ವಜಾ ಮಾಡಿದೆ. ಫೆಬ್ರವರಿಯಲ್ಲಿ ಆತ ಕೆಲಸ ಬಿಟ್ಟು ತೆರಳಿದ" ದೀಪಾಲಿ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.