ಹನೂರಿನ ಕುರುತ್ತಿ ಹೊಸೂರು ಗ್ರಾಮದಲ್ಲಿ 3, 380 ಮತದಾರರಿದ್ದು, ಈ ಪೈಕಿ ಅರ್ಧದಷ್ಟೂ ಜನರೂ ಕೂಡ ಗ್ರಾಮದಲ್ಲಿಲ್ಲ. ಕಾರಣ ಕೆಲಸವಿಲ್ಲ, ಹೀಗಾಗಿ ಗ್ರಾಮ ತೊರೆದಿರುವ ಮಂದಿ ವಿವಿಧೆಡ ಉದ್ಯೋಗವನ್ನರಸಿ ಹೋಗಿದ್ದಾರೆ. ಊರಿನ ನಡುವೆ ಇರುವ ಅಂಗಡಿಯ ಬಳಿ ಒಂದಷ್ಟು ಮಂದಿ ಕೂತಿರುವುದು ಬಿಟ್ಟರೇ ಇಡೀ ಗ್ರಾಮದಲ್ಲಿ ಹುಡುಕಿದರೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಾಣ ಸಿಗುತ್ತಾರೆ. ಕೇವಲ ಈ ಗ್ರಾಮದಷ್ಟೇ ಅಲ್ಲ, ಅಕ್ಕಪಕ್ಕದ ಕುರಟ್ಟೊ ಹೊಸೂರು, ಕೌಡಲ್ಲಿ, ಚೆಂಗ್ಡಿ, ದಂಟಾಲಿ, ಡಿನ್ನಲ್ಲಿ, ರಾಮಪುರ, ಗಜನೂರು, ಕೊಪ್ಪ, ಮಿನ್ನ್ಯ, ಕೆ ಎಸ್ ದೋಡ್ಡಿ ಮತ್ತು ನಕುಂಡಿ ಗ್ರಾಮಗಳಲ್ಲೂ ಇದೇ ಪರಿಸ್ಥಿತಿ. ಉದ್ಯೋಗವನ್ನು ಅರಸಿ ಯುವಕರು ಬೇರೆ ಬೇರೆ ಊರಿಗೆ ಗುಳೆ ಹೋಗಿದ್ದಾರೆ. ಬೆಂಗಳೂರು, ತಮಿಳುನಾಡಿನ ಕೊಯಮತ್ತೂರು, ಸತ್ಯಮಂಗಲ ಮತ್ತು ತಿರುಪುರ್ ಜಿಲ್ಲೆಗಳಿಗೆ ಉದ್ಯೋಗವನ್ನರಸಿ ಹೋಗಿದ್ದಾರೆ ಎಂದು ಗ್ರಾಮದ ಹಿರಿಯ ವ್ಯಕ್ತಿಯಬ್ಬರು ತಿಳಿಸಿದ್ದಾರೆ.