ನಗರದಲ್ಲಿ ನಡೆದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿಯವರು, ಬಂಡೀಪುರ ಅಭಯಾರಣ್ಯದಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರಿರುವ ಕುರಿತು ವರದಿಗಳಾಗಿವೆ. ನನ್ನಂತಹ ಏಅನೇಕ ಹೋರಾಟಗಾರರು ಇಂತಹ ಚಟುವಟಿಕೆಗಳನ್ನು ತಡೆಯಲು ಕಳೆದ 9 ವರ್ಷಗಳಿಂದ ಯತ್ನ ನಡೆಸುತ್ತಿದ್ದೇವೆ. ಅಭಯಾರಣ್ಯದಲ್ಲಿ ರಾತ್ರಿ ಸಂಚಾರ ನಿಷೇಧ ಹಾಗೂ ಇನ್ನಿತರೆ ನಿರ್ಧಾರಗಳನ್ನು ಸುಪ್ರೀಂಕೋರ್ಟ್ ಕೈಗೊಳ್ಳುತ್ತದೆ. ಬಹಿರಂಗವಾಗಿ ಒಂದು ರೀತಿಯಲ್ಲಿ ಹೇಳಿಕೆ ನೀಡಿ, ಬರವಣಿಗೆಯಲ್ಲಿ ಸರ್ಕಾರ ಮತ್ತೊಂದನ್ನು ಹೇಳುತ್ತದೆ ಎಂದು ನಾವು ಭಾವಿಸಬಾರದು. ಮಾಧ್ಯಮಗಳ ವರದಿಯಿಂದ ವಯಾನಾಡಿನ ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.