ಹಿಂದೂ ಧರ್ಮಕ್ಕಾಗಿ ಏನನ್ನಾದರೂ ಮಾಡಲು ಸಿದ್ಧವಿರುವವರನ್ನು ಪರಿಚಯಿಸುವಂತೆ ಮುಖ್ಯಸ್ಥರು ತಿಳಿಸಿದ್ದರು. ಹೀಗಾಗಿ ನಾನು ನಿಹಾಲ್ ಅಲಿಯಾಸ್ ದಾದಾ (ತಲೆಮರೆಸಿಕೊಂಡಿದ್ದಾನೆ), ಅಮೋಲ್ ಕಾಳೆ ಅಲಿಯಾಸ್ ಭಾಯ್'ಸಾಬ್ ನನ್ನು ಪರಿಚಯ ಮಾಡಿಕೊಟ್ಟಿದ್ದೆ. ಒಮ್ಮೆ ಅವರನ್ನು ಪರಿಚಯಿಸಿದ ಬಳಿಕ ನಾನು ಅವರ ಬಗ್ಗೆ ವಿಚಾರಿಸುವಂತಿರಲಿಲ್ಲ ಹಾಗೂ ಅವರನ್ನು ಭೇಟಿ ಮಾಡುವಂತಿರಲಿಲ್ಲ. ಯಾರೇ ಹೊಸ ಸದಸ್ಯನನ್ನು ಭೇಟಿಯಾದರೂ, ಅವರಿಗೆ ನಮ್ಮ ನಿಜವಾದ ಗುರ್ತಿಕೆಯನ್ನು ಹೇಳುವಂತಿರಲಿಲ್ಲ. ಬೇರೆ ಹೆಸರಿನೊಂದಿಗೆ ನಮ್ಮ ಪರಿಚಯ ಮಾಡಿಕೊಳ್ಳಬೇಕಿತ್ತು. ಹೀಗೆಯೇ ಅವರೂ ಕೂಡ ತಮ್ಮ ಗುರ್ತಿಕೆಗಳನ್ನು ಹೇಳುತ್ತಿರಲಿಲ್ಲ. ಭೇಟಿ ವೇಳೆ ಅವರ ವೈಯಕ್ತಿಕ ಮಾಹಿತಿಗಳು, ವಿಳಾಸಗಳನ್ನೂ ಕೇಳುವಂತಿರಲಿಲ್ಲ. ಇದು ಸಂಘಟನೆಯ ನಿಯಮವಾಗಿತ್ತು ಎಂದು ವಿಚಾರಣೆ ವೇಳೆ ಸುಜೀತ್ ಕುಮಾರ್ ಅಲಿಯಾಸ್ ಪ್ರವೀಣ್ ಹೇಳಿಕೊಂಡಿದ್ದಾರೆ.