ಪೊಲೀಸರ ಪ್ರಕಾರ, ಕಳೆದ ಶನಿವಾರ ರಾತ್ರಿ ತರಬೇತಿ ನಂತರ ಜೀವನಭೀಮಾನಗರದ 12 ಮುಖ್ಯರಸ್ತೆಯ 5ನೇ ಕ್ರಾಸ್ ನಿಂದ ತಾನು ವಾಸವಿದ್ದ ಹೋಟೆಲ್ ಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಚಾಕು ತೋರಿಸಿ ಆತನಲ್ಲಿದ್ದ ಬೆಲೆಬಾಳುವ ವಸ್ತುಗಳು ಮತ್ತು ಪರ್ಸ್ ನಲ್ಲಿದ್ದ 470 ರುಪಾಯಿ ಕಿತ್ತುಕೊಂಡಿದ್ದಾರೆ. ಅಲ್ಲದೆ ಡೆಬಿಟ್ ಕಾರ್ಡ್ ಮೂಲಕ ಹಣ ವರ್ಗಾವಣೆ ಮಾಡುವಂತೆ ಒತ್ತಾಯಿಸಿದ್ದಾರೆ. ಓರ್ವ ಆತನಲ್ಲಿದ್ದ ಡೆಬಿಟ್ ಕಾರ್ಡ್ ಅನ್ನು ಕಿತ್ತುಕೊಂಡು, ಪಿಒಎಸ್ ಮಷಿನಲ್ಲಿ ಸ್ವೈಪ್ ಮಾಡಿ, ಪಾಸ್ ವರ್ಡ್ ಹಾಕುವಂತೆ ಬೆದರಿಸಿದ್ದಾರೆ. ತ್ರಿವೇದಿ ಜೀವಭಯದಿಂದ ಪಾಸ್ ವರ್ಡ್ ಹಾಕಿದ್ದಾರೆ. ಬಳಿಕ ಇಬ್ಬರು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.