ಉಚಿತ ಚಿಕಿತ್ಸೆ: ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ವೈದ್ಯನ ಕ್ಲಿನಿಕ್'ಗೆ ರಾಜ್ಯಪಾಲ ವಜುಭಾಯ್ ವಾಲಾ ಭೇಟಿ!

ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಡಾ.ರಮಣರಾವ್ ಅವರ ಕ್ಲಿನಿಕ್'ಗೆ ರಾಜ್ಯಪಾಲ ಡಾ.ವಜುಭಾಯ್ ವಾಯಾ ಅವರು ಭಾನುವಾರ ಭೇಟಿ ನೀಡಿ, ಅಭಿನಂದನೆಗಳನ್ನು ಸಲ್ಲಿಸಿದರು...
ಉಚಿತ ಚಿಕಿತ್ಸೆ: ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ವೈದ್ಯನ ಕ್ಲಿನಿಕ್'ಗೆ ರಾಜ್ಯಪಾಲ ವಜುಭಾಯ್ ವಾಲಾ ಭೇಟಿ!
ಉಚಿತ ಚಿಕಿತ್ಸೆ: ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ವೈದ್ಯನ ಕ್ಲಿನಿಕ್'ಗೆ ರಾಜ್ಯಪಾಲ ವಜುಭಾಯ್ ವಾಲಾ ಭೇಟಿ!
Updated on
ಬೆಂಗಳೂರು: ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಚಿಕಿತ್ಸೆ ನೀಡುವ ಮೂಲಕ ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಡಾ.ರಮಣರಾವ್ ಅವರ ಕ್ಲಿನಿಕ್'ಗೆ ರಾಜ್ಯಪಾಲ ಡಾ.ವಜುಭಾಯ್ ವಾಯಾ ಅವರು ಭಾನುವಾರ ಭೇಟಿ ನೀಡಿ, ಅಭಿನಂದನೆಗಳನ್ನು ಸಲ್ಲಿಸಿದರು. 
ಟಿ.ಬೇಗೂರಿನಲ್ಲಿ ಡಾ.ರಮಣ್ ರಾವ್ ಅವರು, ಹೃದ್ರೋಗ ತಜ್ಞ ಹಾಗೂ ಸಾಮಾನ್ಯ ವೈದ್ಯರಾಗಿದ್ದು,  ಗ್ರಾಮೀಣ ಪ್ರದೇಶದ ಜನರಿಗೆ 45 ವರ್ಷಗಳಿಂದ ವಾರಾಂತ್ಯದ ದಿನವಾದ ಭಾನುವಾರದಂದು ಉಚಿತ ಚಿಕಿತ್ಸೆಗಳನ್ನು ನೀಡುತ್ತಾ ಸಾಮಾಜಿಕ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 
ವೈದ್ಯನ ಈ ಸಾಮಾಜಿಕ ಸೇವೆ ಕುರಿತು ಸಿಇ ವರದಿ ಮಾಡಿತ್ತು. ಈ ವರದಿ ಕುರಿತಂತೆ ಮಾಹಿತಿ ತಿಳಿದ ವಜುಭಾಯ್ ವಾಲಾ ಅವರು ವೈದ್ಯನ ಕ್ಲಿನಿಕ್'ಗೆ ಭಾನುವಾರ ಭೇಟಿ ನೀಡಿ, ಅಭಿನಂದನೆಗಳನ್ನು ಸಲ್ಲಿಸಿದರು. ರಮಣ್ ಅವರ ಕ್ಲಿನಿಕ್'ಗೆ ಭೇಟಿ ನೀಡಿದ ರಾಜ್ಯಪಾಲರು ಕೆಲ ಗಂಟೆಗಳ ಕಾಲ ಸಮಯವನ್ನು ಕಳೆದರು. 
ವೈದ್ಯಕೀಯ ಕ್ಷೇತ್ರದಲ್ಲಿ ರಮಣ್ ಅವರ ಸೇವೆ ಇದರರಿಗೆ ಮಾದರಿಯಾಗಿದೆ. ಇವರ ಉಚಿತ ವೈದ್ಯಕೀಯ ಸೇವೆ ಮತ್ತಷ್ಟು ಜನರಿಗೆ ತಲುಪಲಿ ಎಂದು ಆಶಿಸುತ್ತೇವೆಂದು ವಜುಭಾಯ್ ವಾಲಾ ಅವರು ಹೇಳಿದ್ದಾರೆ. 
ರಾಜ್ಯಪಾಲರ ಭೇಟಿ ಹಾಗೂ ಅಭಿನಂದನೆಗಳು ಬಹಳ ಸಂತಸವನ್ನು ತಂದಿದೆ. ಕ್ಲಿನಿಕ್ ನಲ್ಲಿ ಕೆಲ ಸಮಯದವರೆಗೂ ಕಾಲ ಕಳೆದ ವಜುಭಾಯ್ ವಾಲಾ ಅವರು, ಹಿರಿಯ ನಾಗರೀಕರಿಗೆ ನಾವು ತಂದಿದ್ದ ವಾಕಿಂಗ್ ಸ್ಟಿಕ್ಸ್'ಗಳನ್ನು ವಿತರಿಸಿದರು ಎಂದು ಡಾ.ರಮಣ ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com