ಬೆಂಗಳೂರಿನಲ್ಲಿ ಭಾರೀ ಶಬ್ಧ: ಭೂಕಂಪದ ಭೀತಿಯಲ್ಲಿ ಜನತೆ

ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಶಬ್ಧ ಕೇಳಿ ಬಂದಿದ್ದು, ಭಾರೀ ಶಬ್ಧಕ್ಕೆ ಬೆದರಿದ ಜನತೆ ಭೂಕಂಪನವೆಂದು ಬೆಚ್ಚಿಬಿದ್ದಿದ್ದಾರೆ...ಜನತೆ ಭೀತಿಗೊಳಗಾಗಿರುವ ಘಟನೆ ಗುರುವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರಿ ಶಬ್ಧ ಕೇಳಿ ಬಂದಿದ್ದು, ಭಾರೀ ಶಬ್ಧಕ್ಕೆ ಬೆದರಿದ ಜನತೆ ಭೂಕಂಪನವೆಂದು ಬೆಚ್ಚಿಬಿದ್ದಿದ್ದಾರೆ.
ನಗರದ ಡಾಲರ್ಸ್ ಕಾಲೋನಿ, ಜೆಪಿ. ನಗರ, ರಾಜರಾಜೇಶ್ವರಿ ನಗರ, ಕೆಂಗೇರಿ, ನಾಗರಭಾವಿ, ಕುಮಾರಸ್ವಾಮಿ ಲೇಔಟ್ ನಲ್ಲಿ ಸ್ಫೋಟದ ಶಬ್ಧ ಕೇಳಿ ಬಂದಿದೆ ಎಂದು ವರದಿಗಳು ತಿಳಿಸಿವೆ.
ಸ್ಫೋಟದ ಶಬ್ಧಕ್ಕೆ ಕೆಲ ಕಟ್ಟಡಗಳೂ ಕೂಡ ಅಲುಗಾಡಿದ ಘಟನೆಗಳು ನಡೆದಿದ್ದು, ಸ್ಫೋಟದ ಶಬ್ಧ ಕೇಳಿದ ಜನರು ಮನೆಗಳಿಂದ ಹೊರಗೆ ಓಡಿದ್ದಾರೆ. ಇನ್ನು ಕೆಲ ಮನೆಯಲ್ಲಿದ್ದ ವಸ್ತುಗಳು ಕೆಳಗೆ ಬಿದ್ದಿವೆ ಎಂದು ತಿಳಿದುಬಂದಿದೆ. 
ಸ್ಫೋಟದ ಶಬ್ಧ ಕುರಿತಂತೆ ಸುದ್ದಿವಾಹಿನಿಗಳಲ್ಲಿ ಹೇಳಿಕೆ ನೀಡಿರುವ ಭೂಗರ್ಭ ವಿಜ್ಞಾನಿಗಳು, ಇದು ಭೂಗರ್ಭದ ಒಳಗೆ ಆಗಿರುವ ಕಂಪನವಲ್ಲ. ಮೋಡಗಳ ಏರುಪೇರಿನಿಂದಾಗಿ ಗಾಳಿಯ ಸ್ಥಾನಪಲ್ಲಟದಿಂದ ಶಬ್ಧ ಕೇಳಿ ಬಂದಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com