ಬೆಳಗಾವಿಯಲ್ಲಿರುವ ಸುವರ್ಣಸೌಧಕ್ಕೆ ಮತ್ತಷ್ಟು ಬಲ ತುಂಬುವ ಬದಲು, ಸಿಎಂ ಕುಮಾರ ಸ್ವಾಮಿ ಅದಕ್ಕೆ ವಿರೋಧವಾದ ಕೆಲಸ ಮಾಡುತ್ತಿದ್ದಾರೆ. ಸುವರ್ಣ ಸೌಧ ನಿರ್ಮಾಣವಾದ ಮೇಲೆ, ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತು ಬಿಜೆಪಿ ಸರ್ಕಾರಗಳು ಅಧಿಕಾರ ನಡೆಸಿವೆ, 400 ಎಕರೆ ಜಮೀನಿನಲ್ಲಿ ನಿರ್ಮಾಣವಾಗಿರುವ ಸುವರ್ಣ ಸೌಧವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರ ವಿಫಲವಾಗಿದೆ ಎಂದು ಸ್ಥಳೀಯ ಮುಖಂಡ ಶಿವನಗೌಡ ಪಾಟೀಲ್ ಹೇಳಿದ್ದಾರೆ.