ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ: ಕಬ್ಬನ್ ಪಾರ್ಕ್ ನಲ್ಲಿ ಯುವತಿ ಆತ್ಮಹತ್ಯೆ

: ಪ್ರೇಮಿಸಿದ್ದ ಜೋಡಿಯ ಜಾತಿ ಬೇರೆಯಾದ ಕಾರಣ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಯುವತಿಯೋರ್ವಳು ಕಬ್ಬನ್ ಪಾರ್ಕ್ ನಲ್ಲಿ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಪ್ರೇಮಿಸಿದ್ದ ಜೋಡಿಯ ಜಾತಿ ಬೇರೆಯಾದ ಕಾರಣ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಯುವತಿಯೋರ್ವಳು ಕಬ್ಬನ್ ಪಾರ್ಕ್ ನಲ್ಲಿ ಆತ್ಮಹತ್ಯೆಮಾಡಿಕೊಂಡಿರು ಘಟನೆ ನಡೆದಿದೆ. ಕಬ್ಬನ್ ಪಾರ್ಕ್ ನಲ್ಲಿ ಭಾನುವಾರ ಬೆಳಗ್ಗೆ ಯುವತಿಯ  ಶವ ಪತ್ತೆಯಾಗಿತ್ತು.
ಮೃತಳನ್ನು ಸಂತೋಷಿ ಎಂದು ಗುರುತಿಸಲಾಗಿದೆ, ನೇಪಾಳ ಮೂಲದ ಈಕೆ ತನ್ನ ತಂದೆಯೊಂದಿಗೆ ಡಿಸೋಜಾ ಲೇಔಟ್ ನಲ್ಲಿ ನೆಲೆಸಿದ್ದಳು, ಯುಬಿ ಸಿಟಿಯ ಸ್ಪಾದಲ್ಲಿ ಕೆಲಸ ಮಾಡುತ್ತಿದ್ದಳು,  ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ,ನರೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು, 
ಶನಿವಾರ ಸಂಜೆ ನರೇಶ್ ಸಂಪಂಗಿ ರಾಮನಗರದಲ್ಲಿರುವ ತನ್ನ ಮನೆಗೆ ಕರೆದೊಯ್ದು ಆಕೆಯನ್ನು ತನ್ನ ಪೋಷಕರಿಗೆ ಪರಿಚಯಿಸಲು ನಿರ್ಧರಿಸಿದ್ದ, ಆದರೆ ಇದನ್ನು ತಿಳಿದ ನರೇಶ್ ಪೋಷಕರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಇಬ್ಬರದ್ದು ವಿಭಿನ್ನ ಜಾತಿಯಾಗಿದ್ದರಿಂದ ವಿವಾಹಕ್ಕೆ ವಿರೋಧ ವ್ಯಕ್ತ ಪಡಿಸಿದ್ದರು. 
ಇದನ್ನು ತಿಳಿದ ಸಂತೋಷಿ  ನರೇಶ್ ಪೋಷಕರ ಜೊತೆ ವಾಗ್ವಾದ ನಡೆಸಿದ್ದಳು, ನಂತರ ಕಬ್ಬನ್ ಪಾರ್ಕ್ ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com