ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ಮಾತನಾಡಿ, ಖಾಸಗಿ ಲೇವಾದೇವಿದಾರರು ಬಡವರು ಹಾಗೂ ಬೀದಿ ವ್ಯಾಪಾರಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ಒಂದು ದಿನಕ್ಕೆ ಶೇ.10ರಷ್ಟು ಬಡ್ಡಿ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬಡವರಿಗೆ ಸಹಾಯಕವಾಗಲೆಂದು ಯೋಜನೆ ಜಾರಿ ತರಲು ನಿರ್ಧರಿಸಿದ್ದು, ಇದು ಬಡವರಿಗೆ ಕೊಂಚ ನಿರಾಳವನ್ನು ನೀಡಲಿದೆ ಎಂದು ಹೇಳಿದ್ದಾರೆ.