ಕೊಡಗು ಕಾಡಲ್ಲಿ ಗುಂಡಿನ ಚಕಮಕಿ: ಬೇಟೆಗಾರ ಸಾವು

ಕಾಡುಪ್ರಾಣಿಗಳ ಬೇಟೆಗೆಂದು ಕೇರಳದಿಂದ ಕೊಡಗು ಜಿಲ್ಲಗ ಬಂದಿದ್ದ ಬೇಟೆಗಾರನೊಬ್ಬ ತಾನೇ ಬೇಟಯಾಗಿ ಹೋದ ಘಟನೆ ಭಾಗಮಂಡಲ ಪಂಚಾಯತಿ ವ್ಯಾಪ್ತಿಯ ಮುಂಡ್ರೋಟ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮಡಿಕೇರಿ: ಕಾಡುಪ್ರಾಣಿಗಳ ಬೇಟೆಗೆಂದು ಕೇರಳದಿಂದ ಕೊಡಗು ಜಿಲ್ಲಗ ಬಂದಿದ್ದ ಬೇಟೆಗಾರನೊಬ್ಬ ತಾನೇ ಬೇಟಯಾಗಿ ಹೋದ ಘಟನೆ ಭಾಗಮಂಡಲ ಪಂಚಾಯತಿ ವ್ಯಾಪ್ತಿಯ ಮುಂಡ್ರೋಟ್ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ. 
ಕೇರಳ ಮೂಲದ ಎರಡು ಗುಂಪುಗಳು ಬೇಟೆಗೆಂದು ಕೇರಳ-ಕರ್ನಾಟಕ ಗಡಿಭಾಗವಾದ ಮುಂಡ್ರೋಟ್ ಅರಣ್ಯ ಪ್ರದೇಶಕ್ಕೆ ಬಂದಿವೆ. ನಿನ್ನೆ ಮುಂಜಾನೆ 2ರ ವೇಳೆಗ ಗುಂಪುಗಳ ನಡುವೆೆ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಕೇರಳದ ತಳಿಪರಂಬುವಿನ ಮೀನಂಕೇರಿ ನಿವಾಸಿ ಜಾರ್ಜ್ (50) ಎಂಬುವವರ ಎದೆಗೆ ಗುಂಡು ತಗುಲಿ, ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. 
ಘಟನೆಯಲ್ಲಿ ಇನ್ನೂ ಮೂವರು ಗಾಯಗೊಂಡಿದ್ದಾರೆಂದು ಹೇಳಲಾಗುತ್ತಿದ್ದು, ಎಲ್ಲರೂ ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಆದರ, ಯಾವ ಕಾರಣಕ್ಕೆ ಜಗಳ ಆರಂಭವಾಯಿತು, ಅವರು ಬೇಟೆಗೆದು ಪದೇ ಪದೇ ಈ ಭಾಗಕ್ಕೆ ಬರುತ್ತಿದ್ದರೇ ಎಂಬ ಮಾಹಿತಿಗಳು ಇನ್ನೂ ಲಭ್ಯವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳ-ಕೊಡಗು ಗಡಿಭಾಗದಲ್ಲಿ ಇಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವ. ಅಪರೂಪಕ್ಕೆ ಅಲ್ಲೊಂದು, ಇಲ್ಲೊಂದು ಘಟನೆಗಳು ಬೆಳಕಿಗೆ ಬರುತ್ತಿವೆ. ಘಟನೆ ಸಂಬಂಧ ಮೃತ ಜಾರ್ಜ್'ನ ಪತನಿ ಭಾಗಮಂಡಲ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com