ತಮ್ಮ ವೇತನವನ್ನು ರೂ.3 ಸಾವಿರಕ್ಕೆ ಹೆಚ್ಚಳ ಮಾಡಬೇಕು ಹಾಗೂ ಉದ್ಯೋಗ ಭದ್ರತೆ ಕಲ್ಪಿಸಬೇಕೆಂಬ ಪ್ರಮುಖ ಬೇಡಿಕೆಗಳನ್ನು ಬಿಸಿಯೂಟ ಕಾರ್ಯಕರ್ತರು ಮಂಡಿಸಿದರು. ಆದರೆ, ಹಾಲಿ ರೂ.2,200ರಿಂದ ರೂ.5 ಸಾವಿರ ವೇತನ ಹೆಚ್ಚಳ ಮಾಡಿದರೆ ಬೊಕ್ಕಸಕ್ಕೆ ಭಾರೀ ಹೊರೆಯಾಗುತ್ತದೆ ಎಂಬುದನ್ನು ವಿವರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂತಿಮವಾಗಿ ನೌಕರರ ವೇತನವನ್ನು ರೂ.2,600ಕ್ಕೆ ಹೆಚ್ಚಿಸುವ ಭರವಸೆಯನ್ನು ನೀಡಿದರು ಹಾಗೂ ಅದನ್ನು ಫೆ.16 ರಂದು ಮಂಡನೆ ಮಾಡಲಿರುವ ಬಜೆಟ್ ನಲ್ಲಿ ಪ್ರಕಟಿಸುವುದಾಗಿ ತಿಳಿಸಿದರು ಎಂದು ತಿಳಿದುಬಂದಿದೆ.