ಭವಾರ್ ರಾಮ್ (23) ಎನ್ನುವ ವ್ಯಕ್ತಿ ಹತ್ಯೆಗೀಡಾದ ದುರ್ದೈವಿಯಾಗಿದ್ದು ಈತ ಸೋಮವಾರ ರಾತ್ರಿ 8.30ಕ್ಕೆ ಬಿವಿಕೆ ಐಯ್ಯಂಗಾರ್ ರಸ್ತೆಯಲ್ಲಿನ ಲಿವಿಂಗ್ ಸ್ಟೈಲ್ ಬಟ್ಟೆ ಅಂಗಡಿಯಿಂದ ಮನೆಗೆ ತೆರಳುತ್ತಿದ್ದ. ಪಂಚಕೇಸರಿ ಜ್ಯುವೆಲ್ಲರ್ಸ್ ಬಳಿ ಬಂದಾಗ ದರೋಡೆಕೋರರ ಗುಂಪು ಭವಾರ್ ನನ್ನು ಅಡ್ಡಗಟ್ಟಿ ಅವನ ಮೊಬೈಲ್ ನ್ನು ಕಿತ್ತುಕೊಳ್ಳಲು ನೋಡಿದೆ. ಆಗ ಭವಾರ್ ದರೋಡೆಕೋರರ ಈ ಕೃತ್ಯವನ್ನು ವಿರೋಧಿಸಿದ್ದಾನೆ. ಆಗ ದುಷ್ಕರ್ಮಿಗಳ ತಂಡ ಅವನನ್ನು ಚಾಕುವಿನಿಂದ ಚುಚ್ಚಿ ಬಲವಾಗಿ ಘಾಸಿ ಮಾಡಿದೆ.