ಇದೇ ವೇಳೆ ಮಾತನಾಡಿದ ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಬಿಬಿಎಂಪಿ ಹೆಲಿಪ್ಯಾಡ್ ಗೆ ಹಣ ಸುರಿಯುವುದು ನಿಷ್ಪ್ರಯೋಜಕವೆಂದು ಕಿಡಿ ಕಾರಿದ್ದಾರೆ. "ರಸ್ತೆಗಳು, ಕಾಲುದಾರಿಗಳು, ಬೀದಿ ದೀಪಗಳು ಮುಂತಾದ ಉತ್ತಮ ಸೌಲಭ್ಯಗಳನ್ನು ನೀಡುವುದು ಬಿಬಿಎಂಪಿ ಕಡ್ಡಾಯ ಕರ್ತವ್ಯ. ಅವರು ನಗರವನ್ನು ಸ್ವಚ್ಛವಾಗಿರಿಸಬೇಕು ಮತ್ತು ಉದ್ಯಾನವನಗಳನ್ನು ಮತ್ತು ಇತರ ಮೂಲ ಸೌಲಭ್ಯಗಳನ್ನು ಮೊದಲು ಅಭಿವೃದ್ಧಿಪಡಿಸಬೇಕು. ಖಾಸಗಿ ನಿರ್ವಾಹಕರಿಂದ ಏರ್ ಆಂಬ್ಯುಲೆನ್ಸ್ ಸೇವೆಯನ್ನು ಬೆಂಗಳೂರಿನಲ್ಲಿ ನಡೆಸುವುದೆಂದರೆ ಹೆಲಿಪ್ಯಾಡ್ ಗಾಗಿ ಬಿಬಿಎಂಪಿ ಹಣವನ್ನು ಖರ್ಚು ಮಾಡುವುದು ಏಕೆ? ವಾಸ್ತವವಾಗಿ, ಇದು ರಾಜ್ಯ ಸರ್ಕಾರದ ಕೆಲಸವಾಗಿದೆ. ಬಿಬಿಎಂಪಿ ಮೊದಲು ಉತ್ತಮ ರಸ್ತೆ ನಿರ್ಮಿಸಲು ಮುಂದಾಗಬೇಕು" ಅವರು ಹೇಳಿದ್ದಾರೆ.