ಬೆಂಗಳೂರು ವಿಜಯನಗರದ ವಾಸವಿ ವಿದ್ಯಾಪೀಠ ಶಾಲೆ ವಿದ್ಯಾರ್ಥಿಗಳಾದ ನಿಖಿಲ್ (16) ಮತ್ತು ಹರೀಶ್ (17) ಮೃತಪಟ್ಟಿದ್ದು ಇದರಲ್ಲಿ ನಿಖಿಲ್ ಕೆಂಗೇರಿ ಉಪನಗರ ನಿವಾಸಿಯಾದರೆ ಹರೀಶ್ ಮಾಗಡಿ ರಸ್ತೆಯಲ್ಲಿ ವಾಸವಿದ್ದನು. ಒಟ್ಟು ಆರು ದ್ವಿಚಕ್ರ ವಾಹನಗಳಲ್ಲಿ ಹನ್ನೆರಡು ಸ್ನೇಹಿತರ ತಂಡ ದೇವರಾಯನದುರ್ಗ ಬೆಟ್ಟಕ್ಕೆ ಪ್ರವಾಸ ಬಂದಿತ್ತು. ಆಗ ಆ ತಂಡವು ದುರ್ಗದಿಂದ 15 ಕಿಮೀ ದೂರದಲ್ಲಿದ್ದ ಎಲೆರಾಮಪುರ ಕೆರೆಯನ್ನು ಕಂಡು ಅಲ್ಲಿಗೆ ಈಜಲಿಕ್ಕಾಗಿ ತೆರಳಿದ್ದರು.