2017 ಜನವರಿ ತಿಂಗಳಿನಲ್ಲಿ ಕೊಡಗು, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಪ್ರದೇಶಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ 13 ಚಿರತೆಗಳು ಹಾಗೂ ಆನೆಗಳು ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿವೆ. ಚಿರತೆ ಹಾಗೂ ಆನೆಗಳು ಸುಲಭವಾಗಿ ಸಿಗುವ ಆಹಾರವನ್ನು ಅರಸಿ ಬರುತ್ತವೆ. ಚಿರತೆಗಳು ಬೀದಿ ನಾಯಿಗಳು ಹಾಗೂ ಕುರಿಗಳನ್ನು ಹುಡುಕಿಕೊಂಡು ಬಂದರೆ, ಆನೆಗಳು ಬಾಳೆಹಣ್ಣು, ಕಬ್ಬು ಹಾಗೂ ತೆಂಗನ್ನು ಹುಡುಕಿಕೊಂಡು ಬರುತ್ತವೆ.