ಜೈಲಿನಿಂದ ತಪ್ಪಿಸಿಕೊಂಡ ಸೈಕೋ ಶಂಕರ್ ನನ್ನು ಮತ್ತೆ ಬಂಧನಕ್ಕೊಳಪಡಿಸುವ ವೇಳೆ ಆತನ ಬೆನ್ನಿನ ಮೂಳೆ ಮುರಿದಿತ್ತು. ತನಿಖೆ ಹಿನ್ನಲೆಯಲ್ಲಿ ಆತನನ್ನು ಹಲವು ಪ್ರದೇಶಗಳಿಗೂ ಕರೆದೊಯ್ಯಲಾಗಿತ್ತು. ವಿಚಾರಣೆ ವೇಳೆ ಜೈಲಿನಿಂದ ಏಕೆ ತಪ್ಪಿಸಿಕೊಂಡೆ ಎಂದು ಪ್ರಶ್ನಿಸಿದಾಗ, ಜೈಲಿನಿಂದ ನಾನು ಮತ್ತೆ ಹೊರ ಬರುವ ಎಲ್ಲಾ ವಿಶ್ವಾಸಗಳೂ ಹೋಗಿತ್ತು ಎಂದಿದ್ದ. ಸೈಕೋ ಜೈಶಂಕರ್ ಗೆ ಸಹೋದರನೊಬ್ಬನಿದ್ದು, ಆತನ ಲಾರಿ ಚಾಲಕನಾಗಿದ್ದಾನೆ. ಆತನ ಸಹಾಯದೊಂದಿಗೆ ಹರಿಯಾಣ ರಾಜ್ಯಕ್ಕೆ ಹೋಗಿ, ಅಲ್ಲಿ ತನ್ನ ಕುಟುಂಬಸ್ಥರನ್ನು ಸ್ಥಳೀಂತರಿಸಿ, ಅಲ್ಲಿಯೇ ಕೆಲಸವನ್ನು ಮಾಡಿಕೊಂಡು ಸಂಸಾರ ನಡೆಸಲು ಯೋಜಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.