ಶೀರ್ಘದಲ್ಲೇ ಕೃಷ್ಣರಾಜಪುರದಲ್ಲಿ ಕೋರ್ಟ್ ಸಂಕೀರ್ಣ!

ತಾಲೂಕು ಕೇಂದ್ರವಾಗಿರುವ ಕೃಷ್ಣರಾಜಪುರದಲ್ಲಿ ಶೀರ್ಘದಲ್ಲೇ ಕೋರ್ಟ್ ಸಂಕೀರ್ಣ ಮತ್ತು ಆಧುನಿಕ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದು ಕಾಂಗ್ರೆಸ್ ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ.
ಶಾಸಕ ಭೈರತಿ ಬಸವರಾಜ್
ಶಾಸಕ ಭೈರತಿ ಬಸವರಾಜ್
Updated on
ಬೆಂಗಳೂರು: ತಾಲೂಕು ಕೇಂದ್ರವಾಗಿರುವ ಕೃಷ್ಣರಾಜಪುರದಲ್ಲಿ ಶೀರ್ಘದಲ್ಲೇ ಕೋರ್ಟ್ ಸಂಕೀರ್ಣ ಮತ್ತು ಆಧುನಿಕ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದು ಕಾಂಗ್ರೆಸ್ ಶಾಸಕ ಭೈರತಿ ಬಸವರಾಜ್ ಹೇಳಿದ್ದಾರೆ. 
ಕೃಷ್ಣರಾಜಪುರದಲ್ಲಿ ರಾಜು ಕ್ಷತ್ರೀಯ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಭೈರತಿ ಬಸವರಾಜ್ ಅವರು, ಆಡಳಿತಾತ್ಮಕ ಮೂಲಸೌಕರ್ಯ ಮತ್ತು ನಾಗರಿಕ ಸೌಕರ್ಯಗಳು ಹೆಚ್ಚಿಸುವ ಹಿನ್ನೆಲೆಯಲ್ಲಿ 50 ಕೋಟಿ ವೆಚ್ಚದಲ್ಲಿ ಕೋರ್ಟ್ ಸಂಕೀರ್ಣ ಮತ್ತು 18 ಕೋಟಿ ವೆಚ್ಚದಲ್ಲಿ ಆಧುನಿಕ ಮಾರುಕಟ್ಟೆ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದರು. 
ಕೃಷ್ಣರಾಜಪುರ ಕ್ಷೇತ್ರದಲ್ಲಿ ಆರಂಭಿಸಿದ್ದ ಅಭಿವೃದ್ಧಿ ಕಾರ್ಯಗಳನ್ನು ಪಟ್ಟಿ ಮಾಡಿದ ಭೈರತಿ ಬಸವರಾಜ್ ಅವರು ರಾಮಮೂರ್ತಿನಗರ, ಹೊರಮಾವು ಮತ್ತು ಕಗ್ಗದಾಸಪುರದಲ್ಲಿ ಮೂರು ರೈಲ್ವೆ ಓವರ್ ಬ್ರಿಡ್ಜ್ ಗಳ ಕಾಮಗಾರಿ ವೇಗವಾಗಿ ನಡೆಯುತ್ತಿವೆ ಎಂದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com