ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದಾಗ ತಿಂಗಳೊಳಗಾಗಿ ನನ್ನ ಎಲ್ಲಾ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆಯನ್ನು ನೀಡಿದ್ದರು. ಭರವಸೆ ನೀಡಿ ಎರಡು ತಿಂಗಳಾದರೂ ಯಾವುದೂ ಈಡೇರಿಲ್ಲ. ರಣಜಿ ಕ್ರಿಕೆಟ್ ಆಟಗಾರರು, ಗ್ರ್ಯಾಮಿ ಪ್ರಶಸ್ತಿ, ಕಲಾವಿದರು ಹಾಗೂ ಇತರರಿಗೆ ಸರ್ಕಾರ ಕೊಡುಗೆಗಳನ್ನು ನೀಡುತ್ತಿದ್ದು, ನನಗೆ ನೀಡಬೇಕಿರುವ ಪುರಸ್ಕಾರಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದು ಬಹಳ ನೋವು ತಂದಿದೆ ಎಂದು ತಿಮ್ಮಕ್ಕ ಅವರು ಹೇಳಿಕೊಂಡಿದ್ದಾರೆ.