ಈ ರೀತಿಯ ಬೆಳವಣಿಗೆ ಸಾಂವಿಧಾನಿಕ ಬಿಕ್ಕಟ್ಟಿಗೆ ಸಮಾನ. ಒಬ್ಬ ಸುಪ್ರೀಂಕೋರ್ಟ್'ನ ನಿವೃತ್ತ ನ್ಯಾಯಮೂರ್ತಿಯಾಗಿ, ಈ ಬೆಳವಣಿಗೆಯಿಂದ ನಾನು ಜರ್ಝರಿತನಾಗಿದ್ದೇನೆ. ನ್ಯಾಯಾಂಗವನ್ನು ಸದಾ ಒಂದು ಕುಟುವೆಂದೇ ಪರಿಗಣಿಸಲಾಗಿದೆ. ಕುಟುಂಬದಲ್ಲಿ ಉಂಟಾದ ಕಲಹಗಳನ್ನು ಹೀಗೆ ಬೀದಿಗೆ ತರಬಾರದಿತ್ತು. ನಾಲ್ವರು ನ್ಯಾಯಾಧೀಶರುಗಳಿಗೆ ನೋವಾಗಿರಬಹುದು ಮತ್ತು ಅವರಿಗೆ ನೋವಾಗುವಂತಹ ಘಟನೆಗಳು ನಡೆಯಬಾರದಿತ್ತು. ಅದನ್ನು ಒಪ್ಪಿಕೊಳ್ಳುತ್ತೇನೆ. ಆದರೆ,ಅವರು ದೂರು ತೋಡಿಕೊಳ್ಳಲು ಅನುಸರಿಸಿರುವ ಮಾರ್ಗ ತಪ್ಪು. ಆಂತರಿಕವಾಗಿಯೇ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬಹುದಿತ್ತು. ಬಯಲಿಗೆ ಬರುವ ಅಗತ್ಯವಿರಲಿಲ್ಲ. ಇದರಿಂದ ನ್ಯಾಯಾಂಗ ವ್ಯವಸ್ಥೆಗೆ ಆಗಿರುವ ಹಾನಿಯನ್ನು ಸರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.