ವಿಚಾರಣೆಗೆ ಹಾಜರಾದ ರಾಜೇಂದ್ರ ಕುಮಾರ್ ಅವರನ್ನುದ್ದೇಶಿಸಿ ಮಾತನಾಡಿದ ನ್ಯಾಯಾಲಯ, ಹರಾಜಿನಲ್ಲಿ ಹೆಚ್ಚಿನ ಮೊತ್ತಕ್ಕೆ ಮರಳು ಕೂಗಿದರೂ ಅದನ್ನು ಸ್ವೀಕರಿಸಲು ಸರ್ಕಾರಕ್ಕೆ ಏನು ಅಡ್ಡಿಯಿದೆ? ದಿನಕ್ಕೆ ನೂರಾರು ಜನ ಮರಳು ನೀತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ. ಹೆಚ್ಚು ಹಣ ನೀಡುತ್ತೇವೆಂದರೂ ಟೆಂಕರ್ ಏಕೆ ನಿರಾಕರಣೆ ಮಾಡಲಾಗುತ್ತಿದೆ? ನಾವಂತೂ ಇಂತಹ ಮರಳು ನೀತಿಯನ್ನು ಎಲ್ಲೂ ಕಂಡಿಲ್ಲ. ಇದು ವಾಸ್ತವಿಕವಾದುದಲ್ಲ. ಜಾರಿಗೆ ಸಾಧ್ಯವಿಲ್ಲ. ಮರಳು ನೀತಿ ಏಕಪಕ್ಷೀಯವಾಗಿದ್ದು, ನಿಮ್ಮ ಹರಾಜು ನೀತಿಯನ್ನು ಮೊದಲು ಸರಿಪಡಿಸಬೇಕು. ಎಲ್ಲರಿಗೂ ಮರಳು ಸಿಗಬೇಕೆಂದಿದ್ದರೆ ಮೊದಲು ನಿಮ್ಮ ನೀತಿಯನ್ನು ಬದಲಾಯಿಸಿ, ಇಂದಿರಾ ಕ್ಯಾಂಟೀನ್, ಇಲ್ಲವೇ ಪಡಿತನ ಧಾನ್ಯ ರೀತಿಯಲ್ಲಿ ಮರಳನ್ನೂ ಹಂಚಿ ಎಂದು ಎಂದು ಕೆಂಡಕಾರಿದೆ.