ಕನ್ನಡಿಗರವಿರುದ್ಧ ಗೋವಾ ಜಲಸಂಪನ್ಮೂಲ ಸಚಿವ ವಿನೋದ್ ಪಲೇಕರ್ ಅವರು ಹೇಳಿಕೆ ನೀಡಿರುವುದರಿಂದ ಕೆಲವೆಡೆ ವಿರೋಧದ ವಾತಾವರಣ ನಿರ್ಮಾಣವಾಗಿದೆ, ಭೇಟಿ ಮುನ್ನು ಯಾವುದೇ ರಾಜ್ಯದ ಅಧಿಕಾರಿಗಳಾದರೂ ಅನುಮತಿ ಪಡೆಯಬೇಕು. ಬಳಿಕ ಅಧಿಕಾರಿಗಳಿಗೆ ಭದ್ರತೆ ಹಾಗೂ ಆತಿಥ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತದೆ. ನಮಗೆ ಮಾಹಿತಿ ನೀಡದೆಯೇ ಗೋವಾ ನಿಯೋಗ ಬಂದಿರುವುದನ್ನು ನೋಡಿದರೆ, ವಿಚಾರವನ್ನು ರಾಜಕೀಯ ಮಾಡುವುದಕ್ಕೆ ಯತ್ನಿಸುತ್ತಿದೆ ಎಂದೆನಿಸುತ್ತಿದೆ. ಭದ್ರತಾ ಹಿತದೃಷ್ಟಿಯಿಂದ ನಾನು ಅವರನ್ನು ತಡೆ ಹಿಡಿದಿದ್ದರೆ, ವಿಚಾರವನ್ನು ಅವರು ರಾಜಕೀಯ ಮಾಡುತ್ತಿದ್ದರು. ಪಾರದರ್ಶಕೆಯನ್ನು ಕಾಪಾಡುವ ಸಲುವಾಗಿ ಹಾಗೂ ಇಲ್ಲಸಲ್ಲದ ಆರೋಪಗಳಿಗೆ ಗುರಿಯಾಗುವುದಕ್ಕೆ ಆಸ್ಪದ ಕೊಡದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೋವಾ ನಿಯೋಗ ಭೇಟಿ ನೀಡಿ, ಪರಿಶೀಲನೆ ನಡೆಸಲು ಅನುಮತಿ ನೀಡಿದರು ಎಂದು ತಿಳಿಸಿದ್ದಾರೆ.