ಇನ್ನು ಚಾಮುಂಡಿ ಬೆಟ್ಟ ವ್ಯಾಪ್ತಿಯಲ್ಲಿ ಚಿರತೆಗಳು ಹೆಚ್ಚಾಗಿದ್ದು, ಅವು ಆಗಾಗ್ಗೆ ಆಹಾರ ಅರಸಿ ನಗರದೊಳಗೆ ಬರುವುದು ಸಾಮಾನ್ಯ. ಬೀದಿ ನಾಯಿಗಳ ಬೇಟೆಗಾಗಿಯೇ ಚಿರತೆಗಳು ನಗರ ಸರಹದ್ದಿಗೆ ಪ್ರವೇಶಿಸುತ್ತಿವೆ. ಕಾಡಿನಿಂದ ಬರುವ ಚಿರತೆಗಳನ್ನು ಸೆರೆ ಹಿಡಿಯುವಂತೆ ಬೆಟ್ಟದ ತಪ್ಪಲಿನಲ್ಲಿರುವ ನಿವಾಸಿಗಳು ಪದೇಪದೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದರೂ, ಚಿರತೆ ಸೆರೆ ಹಿಡಿಯಲು ಬೋನುಗಳ ಕೊರತೆ ಇದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿ ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.