ರಸ್ತೆ ಅಪಘಾತ: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಪಕ್ಕ ನಿಂತಿದ್ದ ಸ್ಕಾರ್ಪಿಯೊ ವಾಹನಕ್ಕೆ ಡಿಕ್ಕಿ ಹೊಡೆದು ನೆಲಕ್ಕೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಸ್ತೆ ಪಕ್ಕ ನಿಂತಿದ್ದ ಸ್ಕಾರ್ಪಿಯೊ ವಾಹನಕ್ಕೆ ಡಿಕ್ಕಿ ಹೊಡೆದು ನೆಲಕ್ಕೆ ಬಿದ್ದವರ ಮೇಲೆ ಗೂಡ್ಸ್ ವಾಹನವೊಂದು ಚಲಿಸಿದ ಪರಿಣಾಮ 19 ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿನಿ ದಾರಣುವಾಗಿ ಮೃತಪಟ್ಟ ಘಟನೆ ನಿನ್ನೆ ಜಕ್ಕೂರು ವಿಮಾನ ನಿಲ್ದಾಣ ಸಮೀಪ ಸಂಭವಿಸಿದೆ.

ಮೃತ ವಿದ್ಯಾರ್ಥಿನಿಯನ್ನು ಭೂಮಿಕ ಎಂದು ಗುರುತಿಸಲಾಗಿದೆ. ಈಕೆ ದೇವನಹಳ್ಳಿ ಸಮೀಪ ಮಂಡೂರಿನ ನಿವಾಸಿಯಾಗಿದ್ದಾಳೆ. ಚಿಕ್ಕಬಳ್ಳಾಪುರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಬೈಕ್ ಚಲಾಯಿಸುತ್ತಿದ್ದ ಆಕೆಯ ಸ್ನೇಹಿತ ಮಣಿಕಾಂತ ಸಣ್ಣಪುಟ್ಟ ಗಾಯಗೊಂಡು ಪರಾರಿಯಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಅಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ಕಾಲೇಜಿನ ಹಾಸ್ಟೆಲ್ ನಲ್ಲಿ ತಂಗಿರುವ ಇಬ್ಬರೂ ನಿನ್ನೆ ಭಾನುವಾರವಾಗಿದ್ದರಿಂದ ಮಧ್ಯಾಹ್ನ 1.45ರ ಸುಮಾರಿಗೆ ಬೈಕ್ ನಲ್ಲಿ ಬೆಂಗಳೂರಿಗೆ ಬರುತ್ತಿದ್ದರು. ಹಿಂದೆ ಭೂಮಿಕಾ ಕುಳಿತಿದ್ದಳು. ಜಕ್ಕೂರಿನಿಂದ ಬರುತ್ತಿರುವಾಗ ರಸ್ತೆಬದಿ ಸ್ಕಾರ್ಪಿಯೊ ವಾಹನ ನಿಲ್ಲಿಸಿರುವುದು ಮಣಿಕಾಂತ್ ಗಮನಕ್ಕೆ ಬಂದಿರಲಿಲ್ಲ. ಹಿಂಭಾಗಕ್ಕೆ ಹೋಗಿ ಡಿಕ್ಕಿ ಹೊಡೆದನು. ಇಬ್ಬರೂ ಬಲಭಾಗಕ್ಕೆ ಬಿದ್ದರು. ಆಗ ಹಿಂದಿನಿಂದ ವೇಗವಾಗಿ ಗೂಡ್ಸ್ ವಾಹನವೊಂದು ಬಂದು ಭೂಮಿಕಾ ಮೇಲೆ ಹರಿಯಿತು.

ಗಂಭೀರ ಗಾಯಗೊಂಡು ಭೂಮಿಕಾ ಸ್ಥಳದಲ್ಲಿಯೇ ಮೃತಪಟ್ಟಿದ್ದು ಮಣಿಕಾಂತ್ ಅಲ್ಪಸ್ವಲ್ಪ ಗಾಯಗೊಂಡು ಪಾರಾಗಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com