ಮೈಸೂರು: ಗಂಡನಿಗೆ ಕೈಕೊಟ್ಟ ನವವಿವಾಹಿತೆ; ರಕ್ಷಣೆಗಾಗಿ ಪೊಲೀಸರಿಗೆ ಮೊರೆ

ನವವಿವಾಹಿತೆ ಹೆಣ್ಣು ಮಗಳೊಬ್ಬಳು ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಬಂದಿದ್ದು, ಇದೀಗ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೈಸೂರು; ನವವಿವಾಹಿತೆ ಹೆಣ್ಣು ಮಗಳೊಬ್ಬಳು ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಬಂದಿದ್ದು, ಇದೀಗ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 
ಅಶೋಕಪುರಂ 10ನೇ ಕ್ರಾಸ್ ನಿವಾಸಿಯಾಗಿರುವ ರಕ್ಷಿತ್ ಎಂಬುವವರನ್ನು ಮಹಿಳೆ ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದಳು. ರಕ್ಷಿತ್'ನನ್ನು ಪ್ರೀತಿಸುತ್ತಿರುವ ವಿಚಾರ ಮನೆಯವರಿಗೂ ತಿಳಿದಿತ್ತು. ರಕ್ಷಿತ್ ಬೇರೆ ಜಾತಿಗೆ ಸೇರಿದ ಕಾರಣ ಬೆಂಗಳೂರಿನ ನಿವಾಸಿ ಪ್ರತಾಪ್ ಜೊತೆಗೆ 2 ತಿಂಗಳ ಹಿಂದೆ ಬಲವಂತದಿಂದ ಮದುವೆ ಮಾಡಿಸಿದ್ದಾರೆ. 
ಜೂನ್.30ರಂದು ಮೈಸೂರಿಗೆ ಬಂದ ಮಹಿಳೆ ರಕ್ಷತ್ ನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಕ್ಷಿತ್ ಪ್ರಿಯತಮೆಯನ್ನು ತನ್ನ ಪಿಜಿಯಲ್ಲಿಯೇ ಇರಿಸಿಕೊಂಡಿದ್ದಾನೆ. 
ಈ ಬಗ್ಗೆ ಮಾಹಿತಿ ತಿಳಿದ ಪ್ರತಾಪ್ ಮನೆಯವರು, ಸೊಸೆ ನಾಪತ್ತೆಯಾಗಿರುವುದಾಗಿ ಬೆಂಗಳೂರಿನ ಗಂಗಮ್ಮನ ಗುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಮಹಿಳೆ ತನ್ನ ಪ್ರಿಯಕರನೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com