ಮೈಸೂರು: ಗಂಡನಿಗೆ ಕೈಕೊಟ್ಟ ನವವಿವಾಹಿತೆ; ರಕ್ಷಣೆಗಾಗಿ ಪೊಲೀಸರಿಗೆ ಮೊರೆ

ನವವಿವಾಹಿತೆ ಹೆಣ್ಣು ಮಗಳೊಬ್ಬಳು ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಬಂದಿದ್ದು, ಇದೀಗ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮೈಸೂರು; ನವವಿವಾಹಿತೆ ಹೆಣ್ಣು ಮಗಳೊಬ್ಬಳು ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಬಂದಿದ್ದು, ಇದೀಗ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. 
ಅಶೋಕಪುರಂ 10ನೇ ಕ್ರಾಸ್ ನಿವಾಸಿಯಾಗಿರುವ ರಕ್ಷಿತ್ ಎಂಬುವವರನ್ನು ಮಹಿಳೆ ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದಳು. ರಕ್ಷಿತ್'ನನ್ನು ಪ್ರೀತಿಸುತ್ತಿರುವ ವಿಚಾರ ಮನೆಯವರಿಗೂ ತಿಳಿದಿತ್ತು. ರಕ್ಷಿತ್ ಬೇರೆ ಜಾತಿಗೆ ಸೇರಿದ ಕಾರಣ ಬೆಂಗಳೂರಿನ ನಿವಾಸಿ ಪ್ರತಾಪ್ ಜೊತೆಗೆ 2 ತಿಂಗಳ ಹಿಂದೆ ಬಲವಂತದಿಂದ ಮದುವೆ ಮಾಡಿಸಿದ್ದಾರೆ. 
ಜೂನ್.30ರಂದು ಮೈಸೂರಿಗೆ ಬಂದ ಮಹಿಳೆ ರಕ್ಷತ್ ನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಕ್ಷಿತ್ ಪ್ರಿಯತಮೆಯನ್ನು ತನ್ನ ಪಿಜಿಯಲ್ಲಿಯೇ ಇರಿಸಿಕೊಂಡಿದ್ದಾನೆ. 
ಈ ಬಗ್ಗೆ ಮಾಹಿತಿ ತಿಳಿದ ಪ್ರತಾಪ್ ಮನೆಯವರು, ಸೊಸೆ ನಾಪತ್ತೆಯಾಗಿರುವುದಾಗಿ ಬೆಂಗಳೂರಿನ ಗಂಗಮ್ಮನ ಗುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಮಹಿಳೆ ತನ್ನ ಪ್ರಿಯಕರನೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com