ಮೈಸೂರು; ನವವಿವಾಹಿತೆ ಹೆಣ್ಣು ಮಗಳೊಬ್ಬಳು ಪ್ರಿಯಕರನಿಗಾಗಿ ಪತಿಯನ್ನು ಬಿಟ್ಟು ಬಂದಿದ್ದು, ಇದೀಗ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಅಶೋಕಪುರಂ 10ನೇ ಕ್ರಾಸ್ ನಿವಾಸಿಯಾಗಿರುವ ರಕ್ಷಿತ್ ಎಂಬುವವರನ್ನು ಮಹಿಳೆ ಕಳೆದ 9 ವರ್ಷಗಳಿಂದ ಪ್ರೀತಿಸುತ್ತಿದ್ದಳು. ರಕ್ಷಿತ್'ನನ್ನು ಪ್ರೀತಿಸುತ್ತಿರುವ ವಿಚಾರ ಮನೆಯವರಿಗೂ ತಿಳಿದಿತ್ತು. ರಕ್ಷಿತ್ ಬೇರೆ ಜಾತಿಗೆ ಸೇರಿದ ಕಾರಣ ಬೆಂಗಳೂರಿನ ನಿವಾಸಿ ಪ್ರತಾಪ್ ಜೊತೆಗೆ 2 ತಿಂಗಳ ಹಿಂದೆ ಬಲವಂತದಿಂದ ಮದುವೆ ಮಾಡಿಸಿದ್ದಾರೆ.
ಜೂನ್.30ರಂದು ಮೈಸೂರಿಗೆ ಬಂದ ಮಹಿಳೆ ರಕ್ಷತ್ ನನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಕ್ಷಿತ್ ಪ್ರಿಯತಮೆಯನ್ನು ತನ್ನ ಪಿಜಿಯಲ್ಲಿಯೇ ಇರಿಸಿಕೊಂಡಿದ್ದಾನೆ.
ಈ ಬಗ್ಗೆ ಮಾಹಿತಿ ತಿಳಿದ ಪ್ರತಾಪ್ ಮನೆಯವರು, ಸೊಸೆ ನಾಪತ್ತೆಯಾಗಿರುವುದಾಗಿ ಬೆಂಗಳೂರಿನ ಗಂಗಮ್ಮನ ಗುರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಮಹಿಳೆ ತನ್ನ ಪ್ರಿಯಕರನೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ರಕ್ಷಣೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.