ಶ್ರೀ ಚಾಮುಂಡೇಶ್ವರಿ ದೇಗುಲ ನೌಕರರ ಸಂಘಟನೆ ಅಧ್ಯಕ್ಷ ಕೆ. ಶ್ರೀನಿವಾಸ್ ಅವರು ಮಾತನಾಡಿ, 5ನೇ ವೇತನ ಆಯೋಗದ ಅಡಿಯಲ್ಲಿ 160 ನೌಕರರ ಪೈಕಿ ಕೇವಲ 80 ಮಂದಿಗೆ ಮಾತ್ರ ವೇತನವನ್ನು ನೀಡಲಾಗುತ್ತಿದೆ. ಹಬ್ಬಗಳ ದಿನದಂದು, ಸಾರ್ವತ್ರಿಕ ರಜೆ ದಿನದಂದೂ ಕೂಡ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 8 ಗಂಟೆಗಳಿಗೂ ಅಧಿಕ ಕಾಲ ಕಾರ್ಯನಿರ್ವಹಿಸುತ್ತಾರೆ. 2017-18 ಸಾಲಿನಲ್ಲಿ ದೇಗುಲದ ವಾರ್ಷಿಕವಾಗಿ ರೂ.29.87 ಕೋಟಿ ಬಂದಿದೆ. 160 ನೌಕರರಿಗೂ ಆಯೋಗದ ಅನ್ವಯ ವೇತನವನ್ನು ನೀಡಿದರು, ದೇಗುಲದ ಆದಾಯದ ಮೇಲೆ ಶೇ.35 ರಷ್ಟೂ ಕೂಡ ಪರಿಣಾಮ ಬೀರುವುದಿಲ್ಲ. ವೇತನ ನೀಡುವುದರಲ್ಲಿಯೂ ವಿಳಂಬ ನೀತಿ ಅನುಸರಿಸಲಾಗುತ್ತಿದ್ದು, ಇದು ಸಂಕಷ್ಟದಲ್ಲಿ ಜೀವನ ನಡೆಸುವಂತ ಪರಿಸ್ಥಿತಿಗಳನ್ನು ಎದುರಾಗಿಸಿದೆ ಎಂದು ಹೇಳಿದ್ದಾರೆ.