ಮನೆ ಎದುರಿಗೆ ಕಾರು ನಿಲ್ಲಿಸುವ ವಿಚಾರದಲಿ ಇಬ್ಬರಿಗೂ ಆಗಾಗ ಜಗಳವಾಗುತ್ತಿತ್ತು. ಅಂತೆಯೇ ಭಾನುವಾರವೂ ಜಗಳವಾಗಿದ್ದು ರವಿಇಕುಮಾರ್ ಉದ್ಯಮಿಯ ಕತ್ತಿನಲ್ಲಿರುವ ಚಿನ್ನದ ಸರ ಕಿತ್ತುಕೊಂಡಿದ್ದಾನೆ. ಆಗ ಕುಪಿತರಾದ ಸಂಜೀವ್ ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾರೆ.ಇದರಿಂದ ಗಾಬರಿಗೊಂಡ ರವಿಕುಮಾರ್ ಪೋಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕಾಗಮಿಸಿದ ಹೆಬ್ಬಾಳ ಪೋಲೀಸರು ಸಂಜೀವ್ ಹಾಗು ರವಿಕುಮಾರ್ ವರನ್ನು ಬಂಧಿಸಿದ್ದಾರೆ. ಸಂಜೀವ್ ಮೇಲೆ ಜೀವ ಬೆದರಿಕೆ ಪ್ರಕರಣ ದಾಖಲಾದರೆ ರವಿಕುಮಾರ್ ಮೇಲೆ ಸರ ಅಪಹರಣ ಕೇಸ್ ಹಾಕಲಾಗಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾಗಿ ಪೋಲೀಸರು ಮಾಹಿತಿ ನಿಡಿದ್ದಾರೆ.