ಶೂಟ್ ಮಾಡುವ ಅಭ್ಯಾಸ ನಡೆಸಬೇಕಿದ್ದು, ಏರ್ ಗನ್ ಬೇಕೆಂದು ನವೀನ್ ಕೇಳಿದ್ದ. ಅಲ್ಲದೆ, ಭಗವಾನ್ ಅವರು ಹಿಂದೂ ಧರ್ಮದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ಅವರ ಚಟುವಟಿಕೆಗಳ ಮೇಲೂ ಕಣ್ಗಾವಲಿರಿಸುವಂತೆ ತಿಳಿಸಿದ್ದ. ಸುಜೀತ್, ಕಾಳೆ, ಅಮಿಕ್ ದೆಗ್ವೇಕರ್ ಮತ್ತು ನಿಬಾರ್ ಅವರು ಜನವರಿ ತಿಂಗಳಿನಲ್ಲಿ ನವೀನ್'ನನ್ನು ಭೇಟಿ ಮಾಡಲು ಮದ್ದೂರಿಗೆ ಬಂದಿದ್ದರು. ಈ ವೇಳೆ ನವೀನ್ ನನ್ನನ್ನು ಅವರಿಗೆ ಪರಿಚಯ ಮಾಡಿಕೊಟ್ಟಿದ್ದ. ಅಲ್ಲದೆ, ಭಗವಾನ್ ಅವರ ಚಟುವಟಿಕೆಗಳ ಮೇಲೆ ಕಣ್ಗಾವಲಿರಿಸುವ ಜವಾಬ್ದಾರಿಯನ್ನು ನನಗೆ ನೀಡಿರುವುದಾಗಿಯೂ ನವೀನ್ ತಿಳಿಸಿದ್ದ ಎಂದು ವಿಚಾರಣೆ ವೇಳೆ ಅನಿಲ್ ಹೇಳಿಕೊಂಡಿದ್ದಾನೆ.